ಸಿಎಂ ಮಂಗ್ಳೂರಲ್ಲಿ ಕೂತವ್ರಾ?: ಬಿಜೆಪಿ ವಿರುದ್ಧ ಹುಚ್ಚಾ ವೆಂಕಟ್ ವಾಗ್ದಾಳಿ

ಗುರುವಾರ, 7 ಸೆಪ್ಟಂಬರ್ 2017 (10:42 IST)
ಮಂಗಳೂರು: ಮಂಗಳೂರು ಚಲೋ ರ್ಯಾಲಿ ನಡೆಸುತ್ತಿರುವ ಬಿಜೆಪಿ ವಿರುದ್ಧ ಹುಚ್ಚ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಗಡಿ ದಾಟಲೂ ಪ್ರತಿಭಟನಾಕಾರರಿಗೆ ಅವಕಾಶ ಕೊಡಬೇಡಿ ಎಂದು ವೆಂಕಟ್ ಗುಟುರು ಹಾಕಿದ್ದಾರೆ.


 
ಮಂಗಳೂರು ಜನ ಅಂದ್ರೆ ಎಲ್ಲರೂ ಧ್ವೇಷಿಸೋ ಹಾಗೆ ಮಾಡ್ಬೇಡಿ. ಈ ಪ್ರತಿಭಟನೆ ಮಾಡೋರನ್ನು ಮಂಗಳೂರು ಬಾಗಿಲು ದಾಟಕ್ಕೂ ಅವಕಾಶ ಕೊಡ್ಬೇಡಿ. ನನ್ನ ಅಭಿಮಾನಿಗಳು ಅಲ್ಲಿ ಯಾರಾದ್ರೂ ಇದ್ರೆ ನನ್ನ ಮಾತು ಕೇಳಿ ಎಂದು ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ರ್ಯಾಲಿ ನಡೆಸುತ್ತಿರುವ ಬಿಜೆಪಿಯವರಿಗೆ ಚಾಟಿ ಬೀಸಿದ ಹುಚ್ಚ ವೆಂಕಟ್, ಸಿಎಂ ಸಿದ್ರಾಮಯ್ಯನವರು, ಪ್ರಧಾನಿ ಮೋದಿ ಏನು ಮಂಗಳೂರಲ್ಲಿ ಕೂತಿದ್ದಾರಾ? ಅವರೆಲ್ಲಾ ಅಲ್ಲಿ ಸರಿ ಮಾಡಕ್ಕೆ ಸಾಧ್ಯವಿಲ್ಲ. ನಿಮ್ಮ ಸಮಸ್ಯೆಯನ್ನು ನೀವೇ ಸರಿ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ.. ಗೌರಿ ಲಂಕೇಶ್ ನಿವಾಸದಲ್ಲಿ ಎಸ್ಐಟಿ ತಂಡ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ