ನಾನು ಮತ್ತೆ ಸಿಎಂ ಆಗದಿದ್ರು ಪರವಾಗಿಲ್ಲ, ಕೋಮುವಾದಿಗಳನ್ನ ಅಧಿಕಾರದಿಂದ ದೂರ ಇಡಿ – ಸಿಎಂ ಸಿದ್ದರಾಮಯ್ಯ

ಭಾನುವಾರ, 11 ಮಾರ್ಚ್ 2018 (06:38 IST)
ಮೈಸೂರು : 'ಸಿಎಂ ಕೊಲೆ ಆಯ್ತದೆ ಅಂತಾ ಸ್ಟೇಟ್‌ಮೆಂಟ್ ಕೊಡೋ ಆ ಬೆಜೆಪಿ ಮುಖಂಡ ಈಶ್ವರಪ್ಪ ಒಬ್ಬ ಮೂರ್ಖ. ಸಿಎಂ ರಕ್ತದಲ್ಲಿ ಟಿಪ್ಪು ರಕ್ತ ಹರಿತದೆ ಅಂತಾ ಟೀಕೆ ಮಾಡ್ತಾರೆ. ಇದನ್ನೆಲಾ ನಾನು ಸಹಿಸಿಕೊಳ್ಳಬೇಕಾ? ಸಂಸ್ಕೃತಿ ಬಗ್ಗೆ ಮಾತನಾಡ್ತಾರೆ’ ಎಂದು ಸಿಎಂ ಸಿದ್ದಾರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


‘ಗೋ ಮಾಂಸ ತಿನ್ನೋದು, ಬಿಡೋದು ನನ್ನ ಹಕ್ಕು . ಅದನ್ನ ಕೇಳಲು ಬಿಜೆಪಿ ನಾಯಕರಿಗೆ ಹಕ್ಕು ಕೊಟ್ಟುವರು ಯಾರು? ಯುಪಿಯಲ್ಲಿ ಅತಿ ಹೆಚ್ಚು ದನದ ಮಾಂಸ ಮಾರಾಟ ಮಾಡ್ತಿರಿ. ಅಲ್ಲಿ ಯಾಕೆ ದನದ ಮಾಂಸ ಮಾರಾಟ ನಿಷೇಧಿಸಿಲ್ಲ. ನಾನು ಮತ್ತೆ ಸಿಎಂ ಆಗದಿದ್ರು ಪರವಾಗಿಲ್ಲ. ಕೋಮುವಾದಿಗಳನ್ನ ಅಧಿಕಾರದಿಂದ ದೂರ ಇಡಿ' ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ