ನನಗೆ ಯಾರ ಭಯವೂ ಇಲ್ಲ. ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡಲ್ಲ- ಸಿಎಂ ಸಿದ್ದರಾಮಯ್ಯ

ಗುರುವಾರ, 22 ಮಾರ್ಚ್ 2018 (12:02 IST)
ಮೈಸೂರು : ಫೋನ್ ಕರೆ ಮೂಲಕ ರೇವಣ್ಣ ಬಗ್ಗೆ ಮಂಜೇಗೌಡರ ಜೊತೆ ನಡೆಸಿದ ಸಂಭಾಷಣೆ  ವಿಚಾರಕ್ಕೆ ಸಂಬಂಧಿಸಿದಂತೆ ಅದು ಫೋನ್ ಟ್ಯಾಪ್ ಅಲ್ಲ, ನಾವು ತೆರೆದ ಪುಸ್ತಕ ಎಂಬುದಾಗಿ ಮೈಸೂರಿನಲ್ಲಿ ಗುರುವಾರ(ಇಂದು) ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.


‘ಯಾವುದನ್ನೂ ಕದ್ದುಮುಚ್ಚಿ ಮಾಡಿಲ್ಲ, ಮಾಡುವುದೂ ಇಲ್ಲ ನಾನು ಕಾಂಗ್ರೆಸ್ ಸಿಎಂ ಜೆಡಿಎಸ್ ಸೋಲಿಸಬೇಕೆಂದು ಹೇಳಿರುವೆ. ಬಹಿರಂಗವಾಗಿಯೇ ನಾನು ಮಂಜೇಗೌಡರ ಜೊತೆ ಮಾತನಾಡಿರುವೆ. ನನಗೆ ಯಾರ ಭಯವೂ ಇಲ್ಲ. ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡಲ್ಲ. ಫೋನ್ ಟ್ಯಾಪ್ ಇಲ್ಲದಿದ್ದರೆ ಏನಾದರೂ ಮಾಡಿಕೊಳ್ಳಲಿ.’ ಎಂದು ಮೈಸೂರಿನಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ