ನಾನು ಸಿಎಂ ಹಾಗೂ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೆ-ಡಾ.ಜಿ ಪರಮೇಶ್ವರ್

ಗುರುವಾರ, 18 ಮೇ 2023 (18:05 IST)
ನಾನು ಸಿಎಂ ಹಾಗೂ ಡಿಸಿಎಂ  ಸ್ಥಾನದ ಆಕಾಂಕ್ಷಿಯಾಗಿದ್ದೆ,ಈಗ ಹೈಕಮಾಂಡ್ ನವರು ಘೋಷಣೆ ಮಾಡಿದ್ದಾರೆ.ಮುಂದೆ ಏನಾದರೂ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ನೋಡೋಣ.ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಎರಡನೇ ಬಾರಿ ಸಿಎಂ ಆಗಿದ್ದಾರೆ.ಒಳ್ಳೆಯ ಆಡಳಿತ ನೀಡಲಿ, ನಮ್ಮನ್ನು ವಿಶ್ವಾಸಕ್ಕೆ ಪಡೆದುಕೊಂಡು ಮುಂದುವರೆಯಲಿ ಎಂದು ಪರಮೇಶ್ವರ್ ಹೇಳಿದ್ರು.
 
ಅಲ್ಲದೇ ದಲಿತ ಸಮುದಾಯ ನಿರೀಕ್ಷೆ ಬಹಳ ದೊಡ್ಡದಿದೆ.ಅದನ್ನು ಅರ್ಥ ಮಾಡಿಕೊಂಡು ವರಿಷ್ಠರು ತೀರ್ಮಾನ ಮಾಡ್ತಾರೆ.ಮಾಡದೆ ಹೋದರೆ ಸ್ವಾಭಾವಿಕ ಸಮುದಾಯದ ಪ್ರತಿಕ್ರಿಯೆ ಇದ್ದೆ ಇರುತ್ತದೆ.ಪ್ರತಿಕ್ರಿಯೆ ಬರುವ ಮುಂಚೆ ಎಚ್ಚೇತ್ತುಕೊಳ್ಳುವುದು ಒಳ್ಳೆಯದು ಎಂದು ಪರೋಕ್ಷವಾಗಿ ವರಿಷ್ಠರಿಗೆ ಡಾಜಿ‌. ಪರಮೇಶ್ವರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ