ನನ್ನ ಕತ್ತು ಸೀಳಿದ್ರು ಕಾಂಗ್ರೆಸ್ ಗಂತೂ ಹೋಗುವುದಿಲ್ಲ-ಕಾಪು ಸಿದ್ದಲಿಂಗಸ್ವಾಮಿ

ಶುಕ್ರವಾರ, 28 ಏಪ್ರಿಲ್ 2023 (16:17 IST)
ಬಿಜೆಪಿ ತೊರೆದು ಕಾಪು ಸಿದ್ದಲಿಂಗಸ್ವಾಮಿ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಪು ಸಿದ್ದಲಿಂಗಸ್ವಾಮಿ ವರುಣಾದಲ್ಲಿ ಪ್ರತಿಕ್ರಿಯಿಸಿದ್ದಾರೆ.ಕಳೆದ ಮುವತ್ತು ವರ್ಷಗಳಿಂದ ನಾನು ಯಡಿಯೂರಪ್ಪ ಜೊತೆಗೆ ಇದ್ದೇನೆ.ನಾನೊಬ್ಬ ಬ್ಯಾಚುಲರ್ ಮನುಷ್ಯ.ನಾನೊಬ್ಬ ತತ್ವ ಸಿದ್ದಾಂತಗಳ ಮೇಲೆ ನಂಭಿಕೆ ಇಟ್ಡಿರುವ ಮನುಷ್ಯ.ಬಿಜೆಪಿಯ ಕೆಲಸಗಳನ್ನು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವವನು ನಾನು.ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಡು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ.ಈ ಸಾರಿ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಲು ಹಠ ತೊಟ್ಟಿದ್ದೇನೆ.ನಾನು ಒಬ್ಬ ಬಿಜೆಪಿಯ‌ ನಿಷ್ಠಾವಂತ ಕಾರ್ಯಕರ್ತ ನಾಗಿದ್ದೇನೆ.ಸೋಮಣ್ಣ ಕೂಡ ವರುಣಾದಲ್ಲಿ ಒಳ್ಳೆಯ ಅಭ್ಯರ್ಥಿ ಆಗಿದ್ದಾರೆ.ನನ್ನ ಮೊದಲ ವೋಟು ಬಿಜೆಪಿಗೆ, ನನ್ನ ಕೊನೆಯ ವೋಟು ಬಿಜೆಪಿಗೆ.ನಾನು ಬದುಕಿರುವರೆಗೂ ಬಿಜೆಪಿ ಯಲ್ಲಿ ಇರುತ್ತೇನೆ.ನಾನು ಸತ್ತರೂ ಬಿಜೆಪಿಯ ಶಾಲು ಹೊದಿಸಿಕೊಂಡು ಸಾಯ್ತೇನೆ ವಿನಹ.ನನ್ನ ಕತ್ತು ಸೀಳಿದ್ರು ಕಾಂಗ್ರೆಸ್ ಗಂತೂ ಹೋಗುವುದಿಲ್ಲ.ಯಡಿಯೂರಪ್ಪರೇ ನನಗೆ ಆರಾಧ್ಯ ದೇವ.ಅವರ ಫೋಟೋ ಹಿಡಿದು ನಾನು ಈ ಮಾತು ಹೇಳ್ತಿದ್ದೇನೆ.ಹೀಗಾಗಿ ಬಿಜೆಪಿ ಯಿಂದ ನನಗೆ ಯಾವುದೇ ಮೋಸ ಅನ್ಯಾಯ ಆಗಿಲ್ಲ.ನನ್ನ ಮನೆಯ ದೇವರು ಯಡಿಯೂರಪ್ಪ ಹೀಗಾಗಿ ನಾನು ಬಿಜೆಪಿ ಬಿಡಲ್ಲ ಕಾಂಗ್ರೆಸ್ ಗೆ ಹೋಗಲ್ಲ ಎಂದು ಯಡಿಯೂರಪ್ಪರ ಫೋಟೋ ಹಿಡಿದು  ಕಾಪು ಸಿದ್ದಲಿಂಗಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ