ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: ವಶಪಡಿಸಿಕೊಂಡ ಮರಳು ಎಷ್ಟು ಗೊತ್ತಾ?

ಬುಧವಾರ, 12 ಡಿಸೆಂಬರ್ 2018 (16:32 IST)
ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ದೇವದುರ್ಗ ಪೊಲೀಸರು ದಾಳಿ ನಡೆಸಿದ್ದು, 3.25 ಲಕ್ಷ ಮೌಲ್ಯದ ಮರಳನ್ನು ಜಪ್ತಿ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ಹೊಲದಲ್ಲಿ 650 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೇವದುರ್ಗ ಪೊಲೀಸರು, ಭೋಜಪ್ಪ ಎನ್ನುವವರ ಜಮೀನಿನಲ್ಲಿದ್ದ ಸುಮಾರು 3.25 ಲಕ್ಷ ರೂಪಾಯಿ ಮೌಲ್ಯದ 650 ಮೆಟ್ರಿಕ್ ಟನ್​ ಮರಳು ಜಪ್ತಿ ಮಾಡಿದ್ದಾರೆ. 

ಈ ಮರಳನ್ನು ಕೃಷ್ಣ ನದಿಯಿಂದ ಅಕ್ರಮವಾಗಿ ಸಾಗಿಸಿ ತಂದು ಇಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ