ಅನೈತಿಕ ಸಂಬಂಧಕ್ಕೆ ಅಡ್ಡಿ: ಹೆತ್ತ ಮಗನನ್ನೇ ಹತ್ಯೆಗೈದ ತಾಯಿ

ಮಂಗಳವಾರ, 14 ಮಾರ್ಚ್ 2017 (18:43 IST)
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎನ್ನುವ ಆಕ್ರೋಶದಿಂದಾಗಿ ಹೆತ್ತಮಗನನ್ನೇ ಹತ್ಯೆಗೈದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಗುಪ್ಪಿಯಲ್ಲಿ ತಾಯಿ ರೇಷ್ಮಾ ತನ್ನ ಪ್ರಿಯಕರ ದಿಲೀಪ್ ಜೋಗಿಯೊಂದಿಗೆ ಸೇರಿಕೊಂಡು ಪುತ್ರ ಕಿರಣ್‌ನನ್ನು ಹತ್ಯೆಗೈದಿದ್ದರು.
 
ಪುತ್ರ ಕಿರಣ್‌ನನ್ನು ಪತ್ನಿ ರೇಷ್ಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಜೋಗಿ ಹತ್ಯೆಗೈದಿದ್ದಾರೆ ಎಂದು ಕಿರಣ್ ತಂದೆ ದಾದಾ ಪೊಲೀಸರಿಗೆ ದೂರು ನೀಡಿದ್ದರು.
 
ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಮಹಿಳೆ ರೇಷ್ಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಜೋಗಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
 
ವಿಚಾರಣೆಯಲ್ಲಿ ಆರೋಪಿಗಳು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ