ಚಿತ್ರಗಳು ಮನಸ್ಸಿನ ಭಾವನೆಗಳ ಅಭಿವ್ಯಕ್ತಿ- ಸಿಎಂ

ಭಾನುವಾರ, 8 ಜನವರಿ 2023 (19:40 IST)
ಕರ್ನಾಟಕ ಚಿತ್ರಕಲಾ ಪರಿಷತ್​​ ಆಯೋಜನೆ ಮಾಡಿರುವ 20ನೇ ಚಿತ್ರಸಂತೆಗೆ ಸಿಎಂ ಬಸವರಾಜ್​​ ಬೊಮ್ಮಾಯಿ ಚಾಲನೆ ನೀಡಿದರು. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್​​​​ನಲ್ಲಿ ಚಿತ್ರಸಂತೆ ನಡೆಯುತ್ತಿದೆ. 
ಈ ವೇಳೆ ಮಾತನಾಡಿದ ಅವರು, ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವ ಮಾಧ್ಯಮ. ಮನದಾಳದ ಭಾವಗಳು ಚಿತ್ರಗಳ ಮೂಲಕ ಹೊರಬರುತ್ತೆ. ಚಿತ್ರಕಲೆ ಒಂದು ತರ ಡೈಮಂಡ್ ಇದ್ದ ಹಾಗೆ ಎಂದು ಹೇಳಿದರು. ಮಂಗಳೂರು, ಹುಬ್ಬಳ್ಳಿ, ಧಾರವಾಡದಲ್ಲೆಲ್ಲಾ ಕಡೆ ಚಿತ್ರಕಲಾ ಪರಿಷತ್ ಆಗಬೇಕು. ಅದಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ಕೊಡುತ್ತೆ. ಇದರಿಂದ ಗ್ರಾಮಗಳಲ್ಲಿ ಇರುವ ಕಲಾ ಪ್ರತಿಭೆಗಳಿಗೆ ವೇದಿಕೆ ಸಿಗುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ