ಡಿಸಿಎಂ ಕ್ಷೇತ್ರದಲ್ಲಿ ಘಟಾನುಘಟಿಗಳು ಕಣಕ್ಕೆ: ಹೈವೋಲ್ಟೇಜ್ ಕದನ

ಮಂಗಳವಾರ, 19 ನವೆಂಬರ್ 2019 (18:40 IST)
ರಾಜ್ಯದ ವಿಧಾನಸಭೆ ಉಪಚುನಾವಣೆಯಲ್ಲಿ ಕುಂದಾನಗರಿ ಹೆಚ್ಚು ಗಮನ ಸೆಳೆಯುತ್ತಿದೆ.

ಡಿಸಿಎಂ ಕ್ಷೇತ್ರವಾಗಿರೋ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕುಮಠಳ್ಳಿ ಸ್ಪರ್ಧೆ ಮಾಡಿರೋದು ರಾಜಕೀಯ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಅಥಣಿ-ವಿಧಾನಸಭೆ ಬೈ ಎಲೆಕ್ಷನ್ ನಾಮಪತ್ರ ಪರಿಷ್ಕರಣೆ ಮುಕ್ತಾಯಗೊಂಡಿದ್ದು, ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ.

ಒಟ್ಟು 16 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರಗೊಂಡಿವೆ.  

1. ಗಜಾನನ ಮಂಗಸೂಳಿ(ಕಾಂಗ್ರೆಸ್)
2. ಮಹೇಶ್ ಕುಮಟಳ್ಳಿ (ಬಿಜೆಪಿ)
3. ಗುರಪ್ಪ ದಾಶ್ಯಾಳ(ಜೆಡಿಎಸ್)
4. ಶಹಾಜಹಾನ ಡೊಂಗರಗಾಂವ( ಪಕ್ಷೇತರ)
5. ನಾಗನಾಥ (ಉತ್ತಮ ಪ್ರಜಾಕೀಯ ಪಕ್ಷ)
6. ದಾವುಲಸಾಬ ನದಾಫ( ರಾಷ್ಟ್ರೀಯ ಮಹಿಳಾ ಪಕ್ಷ)
7. ಶಿದ್ರಾಮಗೌಡ ಪಾಟೀಲ್ ( ಪಕ್ಷೇತರ)
8. ಬಾಹುಬಲಿ ಅಜ್ಜಪ್ಪಗೋಳ( ಪಕ್ಷೇತರ)
9. ರವಿ ಪಡಸಲಗಿ ( ಪಕ್ಷೇತರ)
10. ರಸೂಲಸಾಬ ನದಾಫ( ಪಕ್ಷೇತರ)
11. ರಾಜು ಡವರಿ( ಪಕ್ಷೇತರ)
12. ಇಮ್ರಾನ ಪಟೇಲ (ಪಕ್ಷೇತರ)
13. ಸದಾಶಿವ ಕೆ ಬುಟಾಳಿ ( ಪಕ್ಷೇತರ)
14. ಗುರುಪುತ್ರ ಕುಳ್ಳುರ ( ಪಕ್ಷೇತರ)
15. ಶ್ರೀಶೈಲ ಹಳ್ಳದಮಳ( ಪಕ್ಷೇತರ)
16. ವಿನಾಯಕ ಮಠಪತಿ( ಕರ್ನಾಟಕ ಜನತಾ ಪಕ್ಷ)



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ