JDS ವಿರುದ್ಧ BJP ಟ್ವೀಟಾಸ್ತ್ರ

ಮಂಗಳವಾರ, 14 ಮಾರ್ಚ್ 2023 (16:29 IST)
ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮನ್ನು ಸಮರ್ಥಿಸಿ, ಬೇರೆ ಪಕ್ಷದವರನ್ನು ಹಳಿದು ಮತ ಕೇಳುವ ಚಾಳಿ ಮುಂದುವರೆದಿದೆ. ಇದೀಗ JDS ವಿರುದ್ಧ ರಾಜ್ಯ BJP ಕಿಡಿಕಾರಿದೆ.. ಟ್ವೀಟ್​​ ಮೂಲಕ ಮಾಜಿ ಸಚಿವ H.D. ರೇವಣ್ಣ ವಿರುದ್ಧ BJP ಹರಿಹಾಯ್ದಿದೆ.. ಹೊಳೆನರಸೀಪುರ ಶಾಸಕರಾದ ರೇವಣ್ಣರಿಗೆ ಸೋಲುವ ಭಯ ಶುರುವಾಗಿದೆ. ಮಾಜಿ ಸಿಎಂ H.D. ಕುಮಾರಸ್ವಾಮಿ ಹಾಸನಕ್ಕೆ ಕಾಲಿಟ್ಟರೇ ಪ್ರತಿಭಟಿಸುತ್ತೇವೆ ಎನ್ನುವುದರಲ್ಲಿ ಅರ್ಥವಿದೆ. ಆದರೆ ಹಾಸನಕ್ಕೆ ಬಂದು ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ಅವರು ಶಂಕುಸ್ಥಾಪನೆ ಮಾಡುವುದರಿಂದ ನಿಮಗೇಕೆ ಸಂಕಟ? ಎಂದು ಆಕ್ರೋಶದ ಜೊತೆಗೆ ವ್ಯಂಗ್ಯವಾಗಿದೆ. ‘ಹಾಸನ ಏರ್‌ಪೋರ್ಟ್ ಬಿಜೆಪಿ ಸರ್ಕಾರದ ಕೊಡುಗೆ’ ಎಂದು ಹೇಳಲು JDSಗೆ ಅಂಜಿಕೆಯೇ ಎಂದು BJP ಪ್ರಶ್ನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ