Coastal Karnataka: ಕರಾವಳಿಯ ಮಳೆಗಾಲದ ಅತಿಥಿ ಕಲ್ಲಣಬೆಗೆ ಭಾರೀ ಡಿಮ್ಯಾಂಡ್‌

Sampriya

ಮಂಗಳವಾರ, 10 ಜೂನ್ 2025 (15:38 IST)
Photo Courtesy X
ಕರಾವಳಿ ಭಾಗದಲ್ಲಿ ಮುಂಗಾರು ಪ್ರವೇಶವಾಗುತ್ತಿದ್ದ ಹಾಗೇ  ಅಲ್ಲಿನ ಜನರ ಬದುಕಿನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ಬೇರೆ ಭಾಗದ ಜನರಿಗೆ ಹೋಲಿಕೆ ಮಾಡಿದರೆ ಕರಾವಳಿ ಭಾಗದ ಜನರಿಗೆ ಮಳೆಗಾಲ ತಮ್ಮ ಆಹಾರ ಶೈಲಿಯಲ್ಲಿ ಭಾರೀ ಬದಲಾವಣೆಯನ್ನು ತರುತ್ತದೆ.  

ಈ ಸಮಯದಲ್ಲಿ ಇಲ್ಲಿನ ಜನರು ಆದಷ್ಟು ನೈಸರ್ಗಿಕವಾಗಿ ಸಿಗುವ ಆಹಾರಗಳನ್ನೇ ತಮ್ಮ ಖಾದ್ಯಗಳನ್ನಾಗಿ ಮಾಡುತ್ತಾರೆ. ವಿಶೇಷವಾಗಿ ಹಲಸಿನಕಾಯಿ, ಮಾವಿನಹಣ್ಣು, ಕೆಸುವಿನ ಎಲೆ, ಜೀ ಹಲಸು ಹೀಗೇ. 

ಇನ್ನೂ ಮಳೆಗಾಲದ ಅತಿಥಿ ಕಲ್ಲಣಬೆಗೆ ಭಾರೀ ಡಿಮ್ಯಾಂಡ್‌ ಇರುತ್ತದೆ. ಮಳೆ ಮತ್ತು ಗುಡುಗು ಸದ್ದಿಗೆ ಮಣ್ಣಿನ ಅಡಿಯಿಂದ ಕಲ್ಲಣಬೆ ಮೊಳಕೆಯೊಡೆಯುತ್ತದೆ. ಈ ಕಲ್ಲಣಬೆಯ ಸಾಂಬಾರು, ಗ್ರೀವಿಯ ರುಚಿ ಮಾತ್ರ ಅದ್ಭುತವಾಗಿರುತ್ತದೆ. ಒಮ್ಮೆ ತಿಂದ್ರೆ ಮಾತ್ರ ಈ ಖಾದ್ಯ ನಿಮ್ಮ ಫೆವರೆಟ್ ಖಾದ್ಯಗಳಲ್ಲಿ ಒಂದಾಗಿರುವುದರಲ್ಲಿ ಯಾವುದೇ ಡೌಟೇ ಇಲ್ಲ. 

ಕಲ್ಲಣಬೆಯನ್ನು ಹುಡುಕಲು ಸಾಕಷ್ಟು ಸಮಯವು ಬೇಕಾಗುತ್ತದೆ. ಇನ್ನೂ ಕೆಲವರಿಗಷ್ಟೇ ಈ ಕಲ್ಲಣಬೆ ಸಿಗುತ್ತದೆ. ಈ ಕಲ್ಲಣಬೆಗೆ ಮಾರುಕಟ್ಟೆಯಲ್ಲಿ ಭಾರೀ ಭೇಡಿಕೆಯಿಟ್ಟಿರುತ್ತದೆ. ಒಂದು ಸೇರಿಗೆ ₹800ರಿಂದ ₹1.5 ಸಾವಿರದಷ್ಟು ಮಾರಾಟವಾಗುತ್ತದೆ. 

ಹಳ್ಳಿಗಾಡಿನ ಜನರು ಹೆಚ್ಚಾಗಿ ತಾವೇ ಹೋಗಿ ಕಲ್ಲಣವೆಯನ್ನು ಸಂಗ್ರಹಿಸುತ್ತಾರೆ. ಇನ್ನೂ ಕೆಲವರು ಮಾರಾಟ ಮಾಡಲೆಂದೆ ಕಲ್ಲಣಬೆಯನ್ನು ಸಂಗ್ರಹಿಸಿ, ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ