‘ನಿಜವಾದ ಕೋಮುವಾದಿಗಳು ನೀವೇ’ ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು
ಗುಜರಾತ್, ಪುಣೆಯಲ್ಲಿ ಜನರನ್ನು ಗುಳೆ ಎಬ್ಬಿಸಿದವರು ನೀವು. ಲಕ್ಷಾಂತರ ಸಿಖ್ಖರ ಮಾರಣಹೋಮ ಮಾಡಿದ ಪಕ್ಷದವರಾದ ನಿಮ್ಮಿಂದ ನಾವು ಜಾತ್ಯಾತೀತೆಯ ಪಾಠ ಹೇಳಿಸಿಕೊಳ್ಳಬೇಕಾ? ನಿಜವಾದ ಕೋಮುವಾದಿಗಳು ನೀವೇ ಎಂದು ಬಿಜೆಪಿ ತಿರುಗೇಟು ನೀಡಿದೆ.
ದೇವೇಗೌಡರು ಮತ್ತು ಕಾಂಗ್ರೆಸ್ ಆಗಾಗ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ನಾವು ಸಮ್ಮಿಶ್ರ ಸರ್ಕಾರ ರೂಪಿಸಿದೆವು ಎನ್ನುತ್ತಾರೆ. ವಿಪರ್ಯಾಸವೆಂದರೆ ಅವರದೇ ಪಕ್ಷದ ಶಾಸಕ ಡಿಕೆ ಶಿವಕುಮಾರ್ ಇತ್ತೀಚೆಗಷ್ಟೇ ಹಿಂದೂ ಧರ್ಮವನ್ನು ಒಡೆದು ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.