Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Sampriya

ಮಂಗಳವಾರ, 10 ಜೂನ್ 2025 (19:41 IST)
Photo Courtesy X
ತಿರುವನಂತಪುರಂ: ಜೂನ್ 15 ರವರೆಗೆ ಕೇರಳದಾದ್ಯಂತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆ ಮತ್ತು ಬಿರುಸಿನ ಗಾಳಿಯ ಮುನ್ಸೂಚನೆಯ ನಡುವೆ ರಾಜ್ಯದಾದ್ಯಂತ ಹಳದಿ ಮತ್ತು ಕಿತ್ತಳೆ ಎಚ್ಚರಿಕೆಗಳನ್ನು ನೀಡಿದೆ. ಇನ್ನೂ ಕೇರಳ ರಾಜ್ಯದಲ್ಲಿನ ಮಳೆಯ ಮುನ್ಸೂಚನೆ ರಾಜ್ಯಕ್ಕೂ ತಟ್ಟುವ ಸಾಧ್ಯತೆಯಿದೆ. 

ಜೂನ್ 14 ಹಾಗೂ 15ರಂದು ರಾಜ್ಯದಲ್ಲೂ ಹಲವೆಡೆ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಕೇರಳದಲ್ಲಿ ಹಳದಿ ಎಚ್ಚರಿಕೆ ಘೊಷಿಸಿದ ಪ್ರದೇಶಗಳು ಹೀಗಿದೆ: 
ಜೂನ್ 10 (ಮಂಗಳವಾರ): ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ಮತ್ತು ಕಾಸರಗೋಡು. 
ಜೂನ್ 11 (ಬುಧವಾರ): ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು.
ಜೂನ್ 12 (ಗುರುವಾರ): ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ವಯನಾಡ್ ಮತ್ತು ಕೋಝಿಕ್ಕೋಡ್.
ಜೂನ್ 13 (ಶುಕ್ರವಾರ): ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ ಮತ್ತು ಪಾಲಕ್ಕಾಡ್.
ಜೂನ್ 14 (ಶನಿವಾರ): ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ ಮತ್ತು ಕೊಟ್ಟಾಯಂ.

ಕಿತ್ತಳೆ ಎಚ್ಚರಿಕೆ
ಜೂನ್ 12 (ಗುರುವಾರ): ಕಣ್ಣೂರು ಮತ್ತು ಕಾಸರಗೋಡು.
ಜೂನ್ 13 (ಶುಕ್ರವಾರ): ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು.
ಜೂನ್ 14 (ಶನಿವಾರ): ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು

ಹಳದಿ ಎಚ್ಚರಿಕೆಯು 24 ಗಂಟೆಗಳಲ್ಲಿ 6-11 ಸೆಂ.ಮೀ.ಗಳ ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ, ಆದರೆ ಕಿತ್ತಳೆ ಎಚ್ಚರಿಕೆಯು 11-20 ಸೆಂ.ಮೀ.ಗಳ ನಡುವೆ ಭಾರೀ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ