ಪಂಚಮಸಾಲಿ ಪೀಠದ ಸ್ವಾಮೀಜಿಗೆ ಖಡಕ್ ಅವಾಜ್ ಹಾಕಿದ ಸಚಿವ

ಗುರುವಾರ, 16 ಜನವರಿ 2020 (17:32 IST)
ಪಂಚಮಸಾಲಿ ಪೀಠದ ಸ್ವಾಮೀಜಿಯೊಬ್ಬರ ವಿರುದ್ಧ ರಾಜ್ಯದ ಸಚಿವರೊಬ್ಬರು ಗರಂ ಆಗಿ ಅವಾಜ್ ಹಾಕಿದ ಘಟನೆ ನಡೆದಿದೆ.

ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಸಲಹೆ ಕೊಡಲಿ. ಆದರೆ ಸಮಾರಂಭದಲ್ಲಿ ಜನರೆದುರಲ್ಲೇ ಬೆದರಿಕೆ ಹಾಕೋದು ಸರಿಯಲ್ಲ. ಹೀಗಂತ ಸಚಿವ ಹೆಚ್.ನಾಗೇಶ್ ತಿರುಗೇಟು ನೀಡಿದ್ದಾರೆ.

ಸ್ವಜಾತಿಯವರಿಗೆ ರಾಜಕೀಯದಲ್ಲಿ ಸಚಿವ ಸ್ಥಾನ ಕೊಡಿ ಅಂತ ಸ್ವಾಮೀಜಿಗಳು ಕೇಳೋದು ಸರಿಯಲ್ಲ. ಸ್ವಾಮೀಜಿಗಳು ಸಲಹೆ ನೀಡಬೇಕು. ಆದರೆ ಬೆದರಿಕೆ ತಂತ್ರ ಅನುಸರಿಸಬಾರದು ಅಂತ ಹೇಳಿದ್ದಾರೆ.

ಸಮಾರಂಭದಲ್ಲೇ ಮಾತನಾಡಿ ಸಿಎಂ ಬಿ.ಎಸ್.ಯಡಿಯೂರಪ್ಪರ ಘನತೆಗೆ ಕುಂದು ತರೋದು ಬೇಡಾ ಅಂತ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ