ಅತ್ತೆ ಮಗಳಿಗೆ ಮಗು ಕರುಣಿಸಿ ಬೇರೆಯವಳ ಮೇಲೆ ಕಣ್ಣು ಹಾಕಿದ ಖಿಲಾಡಿ ಅಳಿಯ

ಭಾನುವಾರ, 23 ಫೆಬ್ರವರಿ 2020 (15:08 IST)

ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ ಅಳಿಯನೊಬ್ಬ ಆಕೆ ಮದುವೆಯಾದರೂ ಮಾಡಬಾರದ ಕೆಲಸ ಮಾಡಿ ಮಗು ಕರುಣಿಸಿದ್ದಾನೆ.


ತುಮಕೂರು ನಗರದ ಜ್ಯೋತಿ ಹಾಗೂ ವಿರಾಜಪೇಟೆಯ ಬ್ಯಾಂಕ್ ಉದ್ಯೋಗಿ ಪ್ರಸಾದ್ ಸಂಬಂಧಿಗಳಾಗಿದ್ದು, ಪ್ರೀತಿ ಮಾಡುತ್ತಿದ್ರು. ಆದರೆ ಇವರ ಮದುವೆಗೆ ಹುಡುಗಿಯ ಮನೆಯವರು ವಿರೋಧ ವ್ಯಕ್ತಪಡಿಸಿ, ಬೇರೊಬ್ಬನೊಂದಿಗೆ ಮದುವೆ ಮಾಡಿದ್ದಾರೆ.

ಮದುವೆಯಾದ ಮೇಲೆ ಸುಮ್ಮನಿರದ ಪ್ರಸಾದ್, ತನ್ನ ಅತ್ತೆಯ ಮಗಳಾದ ಜ್ಯೋತಿಗೆ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದಾನೆ. ಅಷ್ಟೇ ಅಲ್ಲ, ಅವಳಿಂದ ಗಂಡನಿಗೆ ಡಿವೋರ್ಸ್ ಕೊಡಿಸಿದ್ದಾನೆ. ಒಂದಷ್ಟು ದಿನ ಮಜಾ ಮಾಡಿ ಅವಳ ಕೈಗೆ ಮಗು ಕೊಟ್ಟು ಜ್ಯೋತಿಯ ಕೈಬಿಟ್ಟಿದ್ದಾನೆ.

ಅತ್ತೆ ಮಗಳಿಗೆ ಕೈ ಕೊಟ್ಟಿರೋ ಪ್ರಸಾದ್ ಇದೀಗ ಬೇರೆ ಹುಡುಗಿಯೊಂದಿಗೆ ಮದುವೆಗೆ ರೆಡಿಯಾಗಿದ್ದಾನೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ