‘2-3 ವಾರಗಳಲ್ಲಿ ಬೆಂಗಳೂರು ಯಾವ ರೀತಿ ಅಭಿವೃದ್ಧಿ ಆಗುತ್ತೆ ನೀವೇ ನೋಡಿ’

ಬುಧವಾರ, 11 ಅಕ್ಟೋಬರ್ 2017 (12:07 IST)
ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ಅಪಘಾತಗಳು ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತಂತೆ ಮಾಧ್ಯಮಗಳ ವರದಿಯನ್ನು ಅಲ್ಲಗಳೆದಿರುವ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಎಲ್ಲಾ ಅಪಘಾತಗಳಿಗೂ ರಸ್ತೆ ಗುಂಡಿಗಳೇ ಕಾರಣವಲ್ಲ ಎಂದಿದ್ದಾರೆ.

 
ಮತ್ತೆ ರಸ್ತೆ ಗುಂಡಿಗಳು ಅಪಘಾತಕ್ಕೆ ಕಾರಣವಲ್ಲ ಎಂದು ಹೇಳಿರುವ ಜಾರ್ಜ್ ಮಳೆಯಿಂದಾಗಿ ರಸ್ತೆ ಹಾಳಾಗಿದೆ. ಇನ್ನು 15 ದಿನದಲ್ಲಿ ರಸ್ತೆ ಗುಂಡಿಗಳನ್ನು ರಿಪೇರಿ ಮಾಡುತ್ತೇವೆ.

15 ದಿನದಲ್ಲಿ ನಗರವನ್ನು ಅಭಿವೃದ್ಧಿ ಮಾಡುತ್ತೇವೆ. ಯಾವ ರೀತಿ ಅಭಿವೃದ್ಧಿಯಾಗುತ್ತದೆ ಎಂದು ನೀವೇ ನೋಡಿ ಎಂದು ಮಾಧ್ಯಮಗಳಿಗೆ ಸಚಿವರು ಭರವಸೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ