ಬಸ್ ಮುಷ್ಕರ: ಊರಿಗೆ ಹೋಗಲು ಬಸ್ ಬುಕಿಂಗ್ ಮಾಡಬಹುದೇ, ಕೆಎಸ್ ಆರ್ ಟಿಸಿ ಹೇಳಿದ್ದೇನು
ಇನ್ನೇನು ಈ ವಾರಂತ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬ ಬಂದಿದ್ದು, ಅದರ ಮರುದಿನವೂ ಸೆಕೆಂಡ್ ಸಾಟರ್ಡೇ ನಿಮಿತ್ತ ರಜೆಯಿರುವುದರಿಂದ ಲಾಂಗ್ ವೀಕೆಂಡ್ ಸಿಕ್ಕಂತಾಗುತ್ತದೆ. ಈ ಕಾರಣಕ್ಕೆ ಅನೇಕರು ಈ ವಾರ ಊರಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದಾರೆ.
ಆದರೆ ಈಗ ಬಸ್ ಮುಷ್ಕರದಿಂದಾಗಿ ಬುಕಿಂಗ್ ಮಾಡಬಹುದೇ? ಬುಕಿಂಗ್ ಮಾಡಲು ಬಸ್ ಸಿಗುತ್ತದೆಯೇ ಇಂತಹ ಅನೇಕ ಗೊಂದಲಗಳು ಜನರಲ್ಲಿದೆ. ಕೆಎಸ್ ಆರ್ ಟಿಸಿ ಮೂಲಗಳ ಪ್ರಕಾರ ಮುಷ್ಕರದಿಂದ ಬಸ್ ಓಡಾಟಕ್ಕೆ ತೊಂದರೆಯಾಗಲ್ಲ. ಎಂದಿನಂತೆ ನೀವು ಬುಕಿಂಗ್ ಮಾಡಬಹುದು. ಆಪ್ ನಲ್ಲಿ ವೀಕೆಂಡ್ ನಲ್ಲಿ ಬುಕಿಂಗ್ ಮಾಡುವವರಿಗೆ 15% ರಿಯಾಯಿತಿ ಸೌಲಭ್ಯವೂ ಇದೆ. ಹೀಗಾಗಿ ಊರಿಗೆ ಪ್ರಯಾಣ ಮಾಡುವವರು ಆರಾಮವಾಗಿ ಬಸ್ ಬುಕಿಂಗ್ ಮಾಡಬಹುದು. ಬಸ್ ಗಳ ಸಮಸ್ಯೆಯೂ ಆಗಲ್ಲ ಎಂದು ಸ್ಪಷ್ಟನೆ ಬಂದಿದೆ.