ಬೆಂಗಳೂರು-ಮಂಗಳೂರು ಕುಡ್ಲ ಎಕ್ಸ್`ಪ್ರೆಸ್`ಗೆ ಚಾಲನೆ

ಭಾನುವಾರ, 9 ಏಪ್ರಿಲ್ 2017 (15:44 IST)
ಬೆಂಗಳೂರು-ಮಂಗಳೂರು ಕುಡ್ಲ ಎಕ್ಸ್`ಪ್ರೆಸ್ ಹಗಲು ರೈಲು ಸಂಚಾರಕ್ಕೆ ಮಂಗಳೂರು ಜಂಕ್ಷನ್`ನಲ್ಲಿ ಚಾಲನೆ ಸಿಕ್ಕಿದೆ. ಗೋವಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ರೈಲು ಕೇವಲ 9 ಗಂಟೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ತಲುಪಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹಾಜರಿದ್ದರು.

ನೆಲಮಂಗಲ-ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರಿಂದ ಮಂಗಳೂರಿಗೆ(ಬೆಳಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು ಸಂಜೆ 5.45ಕ್ಕೆ ಮಂಗಳೂರು ತಲುಪಲಿದೆ) ಮತ್ತು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ಬೆಂಗಳೂರಿಗೆ(ಬೆಳಗ್ಗೆ 11.15ಕ್ಕೆ ಹೊರಟು ರಾತ್ರಿ10ಕ್ಕೆ ಸೇರಲಿದೆ) ಸಂಚರಿಸಲಿದೆ.

ಈ ರೈಲು ಮಾರ್ಗ ಆರಂಭವಾದ ಬಳಿಕ ಮಂಗಳೂರಿನ ಸಂಚಾರ ಮಂಗಳೂರು ಮತ್ತು ಬೆಂಗಳೂರು ನಡುವೆ 87 ಕಿ.ಮೀನಷ್ಟು ಸಂಚಾರ ಕಡಿಮೆಯಾಗಲಿದ್ದು, 3 ಗಂಟೆ ಪ್ರಯಾಣದ ಸಮಯ ತಗ್ಗಲಿದೆ. ರಾತ್ರಿ ಸಂಚರಿಸುವ ಮಂಗಲೂರು ಮತ್ತು ಬೆಂಗಳೂರು ರೈಲು ಮೈಸೂರು ಮಾರ್ಗವಾಗಿ ಹೂಗುವುದರಿಂದ ಹೆಚ್ಚುವರಿ ಸುತ್ತಾಗುತ್ತಿದೆ.

ಬೆಳಗಿನ ರೈಲು: ಸದ್ಯ ಮಂಗಳೂರಿಗೆ ರಾತ್ರಿ ರೈಲು ಸಂಚಾರ ಮಾತ್ರವಿದ್ದು, ನಾಳೆಯಿಂದ ಆರಂಭವಾಗಲಿರುವ ಕುಡ್ಲ ಎಕ್ಸ್`ಪ್ರೆಸ್ ರೈಲು ಬೆಳಗಿನ ಹೊತ್ತು ಸಂಚರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಲವು ದಿನಗಳ ಕನಸು ನನಸಾಗಿದೆ.
ರೈಲು ಬೆಳಗಿನ ಸಂಚಾರದಿಂದ ಮಾರ್ಗಮಧ್ಯೆ ಸಿಗುವ ಪ್ರಾಕೃತಿಕ ಸೌಂದರ್ಯ ಸವಿಯುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ. ಬೆಟ್ಟಗುಡ್ಡ, ಗುಹೆಗಳು, ಝರಿಗಳನ್ನ ನೋಡುವ ಭಾಗ್ಯ ಸಿಗಲಿದೆ

ವೆಬ್ದುನಿಯಾವನ್ನು ಓದಿ