ಮುಂಬೈ ಜನರನ್ನು ದೇವರೇ ಕಾಪಾಡಬೇಕು ಎಂದ ಕುಮಾರಸ್ವಾಮಿ

ಶನಿವಾರ, 23 ನವೆಂಬರ್ 2019 (22:14 IST)
ಚುನಾವಣೆ ಬಳಿಕ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ –ಎನ್ ಸಿಪಿ ಅಧಿಕಾರಕ್ಕೆ ಬಂದಿರೋದ್ರಿಂದ ಮಹಾರಾಷ್ಟ್ರದ ಜನರನ್ನು ಆ ದೇವರೇ ಕಾಪಾಡಬೇಕು.

ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು, ಬಿಜೆಪಿ ವಿರುದ್ಧ ಶರದ್ ಪವಾರ್ ಹೋರಾಡುತ್ತಿದ್ದಾರೆ. ಇದೀಗ ಸಿದ್ಧಾಂತಕ್ಕೆ ಬೆಲೆ ಇಲ್ಲದಾಗಿದೆ ಎಂದಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಜೊತೆಗೆ ಬಿಹಾರದಲ್ಲಿ ನಿತೀಶ್ ಕುಮಾರ್ ಸೇರಿಕೊಂಡಿದ್ದರು. ಈಗ ಬಿಜೆಪಿ ಜೊತೆಗೆ ಸರಕಾರ ಮಾಡಿದ್ದಾರೆ.

ಬಿಜೆಪಿ ಈಗ ಎನ್ ಸಿಪಿ ಜೊತೆಗೆ ಸೇರಿ ಸರಕಾರ ರಚನೆ ಮಾಡಿದೆ. ಬಿಜೆಪಿಯವರಿಗೆ ತತ್ವ, ಸಿದ್ಧಾಂತ ಇಲ್ಲ ಅಂತ ಹೆಚ್ . ಡಿ. ಕೆ ಹರಿಹಾಯ್ದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ