‘ರಾಜೀನಾಮೆ ನೀಡಿದ ಶಾಸಕ ಕುಮಠಳ್ಳಿಗೆ ಶ್ರದ್ಧಾಂಜಲಿ’

ಭಾನುವಾರ, 7 ಜುಲೈ 2019 (15:38 IST)
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಹೇಶ್ ಕುಮಠಳ್ಳಿಗೆ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. 

ಅಥಣಿ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಠಳ್ಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ವಾಟ್ಸಅಪ್  ಮತ್ತು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದೆ ಶ್ರದ್ಧಾಂಜಲಿ ಸಲ್ಲಿಸಿದ ಮಹೇಶ್ ಕುಮಠಳ್ಳಿ ಭಾವಚಿತ್ರ.
ರಾಜ್ಯದ ಮೈತ್ರಿ ಸರಕಾರದ 13 ಜನ ಶಾಸಕರು ರಾಜೀನಾಮೆ ನೀಡಿದ ನಂತರ ಅಥಣಿ ಕ್ಷೇತ್ರದ  ಜನರು ಮಹೇಶ್ ಕುಮಠಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಹೇಶ ಕುಮಠಳ್ಳಿ ವರ್ತನೆಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ. ಬೆನ್ನಿಗೆ ಚೂರಿ ಹಾಕಿದ ಮಹೇಶ್ ಕುಮಠಳ್ಳಿ ನಮ್ಮ ಕ್ಷೇತ್ರದ ಪಾಲಿಗೆ ಸತ್ತು ಹೋದರು ಎಂದು ಭಾವ ಚಿತ್ರ ಹಾಕಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ