ಮಹಾಮಳೆಗೆ ಮನೆ ಮುಂದೆ ಭೂಮಿ ಕುಸಿತ

ಭಾನುವಾರ, 9 ಜುಲೈ 2023 (14:02 IST)
ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೇಗಲುಬೈಲು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಮನೆ ಮುಂದೆ ಭೂಮಿ ಕುಸಿದಿದೆ. ಮನೆ ಮುಂದೆ ಕುಸಿತದಿಂದ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದೆ. ವೇದಾ, ಪುಟ್ಟ ಎಂಬುವರಿಗೆ ಸೇರಿದ ಮನೆ ಮುಂದೆ ಭೂ ಕುಸಿದಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಭೂ ಕುಸಿತವಾಗಿದೆ ಎಂದು ಕುಟುಂಬಸ್ಥರ ಆಕ್ರೋಶ ಹೊರಹಾಕುತ್ತಿದ್ದಾರೆ. ಮನೆ ಮುಂದೆಯೇ ಭೂ ಕುಸಿತವಾಗಿರೋದ್ರಿಂದ ಭಯದಲ್ಲೇ ಬಡ ಕುಟುಂಬ ಬದುಕುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ