ಜಮೀನು ಗಲಾಟೆ: ವ್ಯಕ್ತಿಯೋರ್ವನ ಮೇಲೆ ಫೈರಿಂಗ್

ಭಾನುವಾರ, 21 ಅಕ್ಟೋಬರ್ 2018 (15:54 IST)
ಸಾಕಷ್ಟು ವರ್ಷಗಳಿಂದ ಜಮೀನಿನ ವಿಚಾರವಾಗಿ ಗಲಾಟೆ ನಡೆಯುತ್ತಿದ್ದು ಅದೇ ವಿಚಾರಕ್ಕೆ  ವ್ಯಕ್ತಿಯೋರ್ವನ ಮೇಲೆ ಫೈರಿಂಗ್ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಲಿಂಗಾಪುರದಲ್ಲಿ ಈ ಘಟನೆ  ನಡೆದಿದೆ. ಸಾಕಷ್ಟು ವರ್ಷಗಳಿಂದ ಜಮೀನಿನ ವಿಚಾರಕ್ಕೆ ಆನೇಕಲ್ ಸಮೀಪದ ಲಿಂಗಾಪುರದ ರಾಮು ಹಾಗು ಕರ್ಪೂರು ಮೂಲದ ಸಾದಪ್ಪ ಈ ಇಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು.

ಜಮೀನಿನ ಬಳಿ ಸ್ವಚ್ಛ ಮಾಡಲೇಂದು ಬಂದಿದ್ದ ರಾಮುವನ್ನು ನೋಡಿದ ಸಾದಪ್ಪ  ರಾಮುವಿನ ಜೊತೆ ಗಲಾಟೆ ನಡೆಸಿದ್ದಾನೆ. ಗಲಾಟೆಯು ಅತಿರೇಕಕ್ಕೆ ಹೋದಾಗ  ರಾಮು ಮೇಲೆ ಸಾದಪ್ಪ ಫೈರಿಂಗ್ ಮಾಡಿದ್ದು ರಾಮು ಎಂಬಾತನ ಕಾಲಿಗೆ ತೀವ್ರ ಗಾಯವಾಗಿದೆ. ಗಾಯಾಳುವನ್ನು ಬೊಮ್ಮಸಂದ್ರ ಬಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಜಿಗಣಿ ಪೋಲಿಸರು ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ