ಅಂಬರೀಶ್ ಶಾಸಕ ಸ್ಥಾನ ರದ್ದುಪಡಿಸಲು ಸ್ಪೀಕರ್‌ಗೆ ಪತ್ರ

ಬುಧವಾರ, 17 ಮೇ 2017 (18:03 IST)
ಮಾಜಿ ಸಚಿವ ಅಂಬರೀಶ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಯಾವುದೇ ಕಲಾಪಗಳಲ್ಲಿ ಭಾಗಿಯಾಗಿಲ್ಲ, ಶಾಸಕರು ಸತತ ಮೂರು ಬಾರಿ ಸದನದ ಕಲಾಪಕ್ಕೆ ಗೈರುಹಾಜರಾದಲ್ಲಿ ಅವರ ಶಾಸಕ ಸ್ಥಾನವನ್ನು ರದ್ದುಪಡಿಸುವಂತೆ ಕೋರಿ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ.
 
ಮಂಡ್ಯದ ಜೆಡಿಯು ಜಿಲ್ಲಾಧ್ಯಕ್ಷ ಬಿ.ಎಸ್.ಗೌಡ ಎನ್ನುವವರು ಸ್ಪೀಕರ್‌ಗೆ ಪತ್ರ ಬರೆದು ಮಾಜಿ ಸಚಿವ ಅಂಬರೀಶ್ ಶಾಸಕ ಸ್ಥಾನವನ್ನು ರದ್ದುಪಡಿಸುವಂತೆ ಕೋರಿದ್ದರು.
 
ಬಿ.ಎಸ್.ಗೌಡ ಬರೆದ ಪತ್ರಕ್ಕೆ ಉತ್ತರಿಸುವಂತೆ ಮಾಜಿ ಸಚಿವ ಅಂಬರೀಶ್‌ಗೆ ಸ್ಪೀಕರ್ ಕೆ.ಬಿ.ಕೋಳಿವಾಡ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ