ಮಕ್ಕಳ ದಿನಾಚರಣೆ ದಿನವೇ ಅನಾಥವಾದ ನವಜಾತ ಹೆಣ್ಣು ಶಿಶು

ಬುಧವಾರ, 14 ನವೆಂಬರ್ 2018 (19:24 IST)
ಮಕ್ಕಳ ದಿನಾಚರಣೆ ದಿನದಂದೇ ಹೆಣ್ಣು ಶಿಶುವೊಂದು ಅನಾಥವಾದ ಘಟನೆ ನಡೆದಿದೆ.

ಹೆತ್ತಮ್ಮಳೇ ಆಸ್ಪತ್ರೆಯಲ್ಲಿ  ಹೆರಿಗೆ ನಂತರ ಹೆಣ್ಣು ಶಿಶು ಬಿಟ್ಟು ಪರಾರಿಯಾಗಿದ್ದಾಳೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಯಿ ತನ್ನ ಹೆರಿಗೆ ನಂತರ ಬೆಳಿಗ್ಗೆ ಹೆತ್ತ ಶಿಶು ಬಿಟ್ಟು ಪರಾರಿಯಾಗಿದ್ದಾಳೆ.

ಹೆತ್ತಮ್ಮಳ ಮಡಿಲು ಸೇರಲು ಮಗು ಹಂಬಲಿಸುತ್ತಿದೆ. ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಿಂದ ನವಜಾತ ಹೆಣ್ಣು ಶಿಶು ರಕ್ಷಣೆ ಮಾಡಲಾಗಿದೆ. ಶಿಶುವನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು
ಗುರುಮಠಕಲ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ