ಮಹದಾಯಿ ನದಿ ನೀರು ವಿವಾದ; ಗೋವಾ ಪರ ನಿಂತರಾ ದಿನೇಶ್ ಗುಂಡೂರಾವ್?

ಭಾನುವಾರ, 1 ನವೆಂಬರ್ 2020 (10:40 IST)
ಬೆಂಗಳೂರು : ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ  ಗೋವಾ ಪರ ನಿಂತರಾ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಎಂಬ ಪ್ರಶ್ನೆ ಉದ್ಭವವಾಗಿದೆ.

ದಿನೇಶ್ ಗುಂಡೂರಾವ್ ಮಹದಾಯಿ ವಿಚಾರವಾಗಿ ಕಾನೂನು ಹೋರಾಟ ಮಾಡುವುದಾಗಿ ಗೋವಾ ಪರ ಹೇಳಿಕೆ ನೀಡಿದ್ರಾ? ಎಂಬ ಪ್ರಶ್ನೆ ಮೂಡಿದೆ. ಗೋವಾ ಕಾಂಗ್ರೆಸ್ ನಿರ್ಣಯಕ್ಕೆ ದಿನೇಶ್ ಬದ್ಧ . ಹೀಗಂತ ದಿನೇಶ್ ಹೇಳಿದ್ದಾರೆಂದ ಗೋವಾ ಕಾಂಗ್ರೆಸ್ ತಿಳಿಸಿದೆ. ನಮ್ಮ ನಿರ್ಣಯಕ್ಕೆ ದಿನೇಶ್ ಗುಂಡೂರಾವ್ ಬೆಂಬಲ ಇದೆ ಎಂದು ಗೋವಾ ವಿಪಕ್ಷ ನಾಯಕ ದಿಗಂಬರ ಕಾಮತ್ ಹೇಳಿಕೆ ನೀಡಿದ್ದಾರೆ.

ಹಾಗಾದರೆ  ರಾಜ್ಯದ ಹಿತಾಸಕ್ತಿ ಕಡೆಗಣಿಸಿದ್ರಾ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ಮಹದಾಯಿ ಹೋರಾಟಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಹದಾಯಿ ಹೋರಾಟಗಾರ ಅಶೋಕ್ ಚಂದರಗಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ