ನಾಲ್ಕನೆಯ ಮದುವೆಗೆ ತಯಾರಿ: ಗ್ರಹಚಾರ ಬಿಡಿಸಿದ ಪ್ರಿಯತಮೆ

ಶುಕ್ರವಾರ, 24 ಜೂನ್ 2016 (11:17 IST)
ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕನೆಯ ಮದುವೆಯಾಗ ಹೊರಟ ವಂಚಕನಿಗೆ ಐದನೆಯ ಹುಡುಗಿ ಅಂದರೆ ಆತನ ಗರ್ಲ್ ಫ್ರೆಂಡ್ ಮತ್ತು ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ನಡೆದಿದೆ. 
 
ಆರೋಪಿ ವಜ್ರೇಶ್ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೆಯ ಮದುವೆಯಾಗಿದ್ದ. ಆಕೆಯನ್ನು ಸಹ ತೊರೆದು ಮೂರನೆಯವಳನ್ನು ಕಟ್ಟಿಕೊಂಡಿದ್ದ. ಈಗ ಅವಳನ್ನು ದೂರ ಮಾಡಿ ನಾಲ್ಕನೆಯವಳನ್ನು ಕಟ್ಟಿಕೊಳ್ಳುವ ಸನ್ನಾಹದಲ್ಲಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆತನ ಗರ್ಲ್ ಫ್ರೆಂಡ್ ಶೈಲಜಾ ಈ ಕುರಿತು ವಿಚಾರಿಸಲು ತೆರಳಿದಾಗ ಆತ ಅವಳಿಗೆ ನಾಯಿಯನ್ನು ಛೂ ಬಿಟ್ಟು ಕಚ್ಚಿಸಿದ್ದ. ಆಗ ಆಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಳು.
 
ಇತ್ತ ನಾಲ್ಕನೆಯ ಮದುವೆಗೆ ಸಿದ್ಧತೆ ಭರದಿಂದ ಸಾಗುತ್ತಿದ್ದಂತೆ ಮತ್ತೆ ಇಂದು ಆತನ ಮನೆಗೆ ಬಂದ ಪ್ರಿಯತಮೆ ತನ್ನ ಸಂಬಂಧಿಕರ ಜತೆ ಬಂದ ಮನಬಂದಂತೆ ಥಳಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾಳೆ. 
 
ಬರೊಬ್ಬರಿ ಐದು ಹುಡುಗಿಯರಿಗೆ ಪ್ರೀತಿ, ಮದುವೆ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಕೀಚಕ ಈಗ ಕಂಬಿ ಎಣಿಸುವಂತಾಗಿದೆ. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ