ಪುಣೆ: ಪುಣೆಯ ಟ್ರಾಫಿಕ್ ಜಂಕ್ಷನ್ನಲ್ಲಿ ತನ್ನ BMW ಕಾರಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡಿ, ಭಾರೀ ಟ್ರೋಲ್ಗೆ ಒಳಗಾದ ಗೌರವ್ ಅಹುಜಾ ಎನ್ನುವ ವ್ಯಕ್ತಿ ಇದೀಗ ಕ್ಷಮೆಯಾಚಿಸಿ, ವಿಡಿಯೋ ಶೇರ್ ಮಾಡಿದ್ದಾನೆ. ವಿಡಿಯೋದಲ್ಲಿ ತಾನು ಮಾಡಿದ ಕೃತ್ಯದಿಂದ ನನಗೆ ನಾಚಿಕೆಯಾಗಿದೆ ಎಂದು ಹೇಳಿದ್ದಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಆ ವ್ಯಕ್ತಿ ಪುಣೆಯ ಜನರಿಗೆ, ಮಹಾರಾಷ್ಟ್ರದ ಜನರಿಗೆ, ಇಡೀ ಭಾರತಕ್ಕೆ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು.
"ನಾನು ಗೌರವ್ ಅಹುಜಾ, ಪುಣೆಯಲ್ಲಿ ವಾಸಿಸುತ್ತಿದ್ದೇನೆ, ನಿನ್ನೆಯ ಕೃತ್ಯಕ್ಕೆ ನನಗೆ ತುಂಬಾ ನಾಚಿಕೆಯಾಗಿದೆ, ಅದನ್ನು ನಾನೇ ಮಾಡಿದ್ದೇನೆ" ಎಂದು ತಪ್ಪೊಪ್ಪಿಕೊಂಡಿದ್ದಾನೆ,.
"ನಾನು ಪುಣೆ, ಮಹಾರಾಷ್ಟ್ರ ಮತ್ತು ಭಾರತದ ಎಲ್ಲಾ ಜನರಿಗೆ ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಮತ್ತು ನಾನು ಪೊಲೀಸ್ ಇಲಾಖೆ ಮತ್ತು [ಏಕ್ನಾಥ್] ಶಿಂಧೆ ಸಾಹಿಬ್ಗೆ ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಮತ್ತು ನನಗೆ ಒಂದು ಅವಕಾಶ ನೀಡಿ, ಈ ತಪ್ಪು ಮುಂದಿನ ಮರುಕಳಿಸುವುದಿಲ್ಲ. ನನಗೆ ನಿಜವಾಗಿಯೂ ವಿಷಾದವಿದೆ ಎಂದು ಕೇಳಿಕೊಂಡಿದ್ದಾನೆ.