ಒಂದೇ ರಾತ್ರಿಗೆ ಗಡಗಡ ನಡುಗಿದ ಮಂಡ್ಯ

ಮಂಗಳವಾರ, 22 ಅಕ್ಟೋಬರ್ 2019 (19:02 IST)
ಒಂದೇ ರಾತ್ರಿಗೆ ಮಂಡ್ಯದ ಜನರು ಗಡಗಡ ನಡುಗಿ ಹೋಗಿದ್ದಾರೆ.

ರಾತ್ರಿಯಿಡೀ  ಧಾರಕಾರ ಮಳೆಗೆ ತತ್ತರಿಸಿ ಹೋಗಿದ್ದಾರೆ ಮಂಡ್ಯದ ಜನರು. ಸ್ವಲ್ಪ ದಿನದ ಹಿಂದೆ ಬೆಳಗಾವಿ ಮತ್ತು ಹುಬ್ಬಳ್ಳಿ- ಧಾರವಾಡ ಸುತ್ತಮುತ್ತ ಸುರಿದ ಮಳೆಯಿಂದ ಆ ಭಾಗದ ಜನರು ತತ್ತರಿಸಿ ಹೋಗಿದ್ರು.

ಆ ಭಾಗದ ಗೋಳನ್ನು ಮತ್ತು ಪರದಾಟವನ್ನು ನೋಡಿ ರಾಜ್ಯದ ಜನರು ಬೆಚ್ಚಿ ಬಿದ್ದು, ನೆರವಿನ ಹಸ್ತ ಚಾಚಿದ್ದರು.
ಅಲ್ಲಿಂದ ಶುರುವಾದ ಕಂಟಕ ಮತ್ತೆ ಮಳೆರಾಯ ಮಂಡ್ಯ ಜಿಲ್ಲೆಯ ಭಾಗವನ್ನು ಆವರಸಿಕೊಂಡಿದೆ.

ಮಂಡ್ಯ ಸುತ್ತಮುತ್ತಲು ರಾತ್ರಿ ಇಡೀ ಧಾರಕಾರ ಮಳೆ ಸುರಿದಿದೆ. ಕೃಷ್ಣರಾಜ ಪೇಟೆಯ ಅಗ್ರಹಾರ - ಬಾಚಹಳ್ಳಿ ಸೇತುವೆ ಮುಳುಗಡೆಯಾಗಿದೆ.

ಮಳೆಯ ಆರ್ಭಟಕ್ಕೆ ನೂರಾರು ಎಕರೆ ಭತ್ತ, ಕಬ್ಬು ಬೆಳೆ ನಾಶವಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ