Mangaluru Suhas Shetty Murder: ಸುಹಾಸ್ ಶೆಟ್ಟಿ ಮರ್ಡರ್ ಮಾಡಿದ ಆರೋಪಿಗಳು ಎಸ್ಕೇಪ್ ಆಗುವುದನ್ನು ನೋಡುತ್ತಾ ನಿಂತ ಪಬ್ಲಿಕ್: ವಿಡಿಯೋ

Krishnaveni K

ಶುಕ್ರವಾರ, 2 ಮೇ 2025 (11:30 IST)
Photo Credit: X
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮರ್ಡರ್ ಮಾಡಿದ ಆರೋಪಿಗಳು ಎಸ್ಕೇಪ್ ಆಗುವುದನ್ನು ಸಾರ್ವಜನಿಕರು ನೋಡುತ್ತಾ ನಿಂತ ವಿಡಿಯೋ ಈಗ ವೈರಲ್ ಆಗಿದೆ.

ಬಜ್ಪೆಯಲ್ಲಿ ಜನನಿಬಿಡ ರಸ್ತೆಯಲ್ಲೇ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ಗುಂಪು ಹೊಡೆದು ಬರ್ಬರವಾಗಿ ಕೊಲೆ ಮಾಡಿತ್ತು. ವಿಪರ್ಯಾಸವೆಂದರೆ ಅಕ್ಕಪಕ್ಕ ಜನ ಓಡಾಡುತ್ತಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ.

ಇನ್ನೂ ಒಂದು ಬೇಸರದ ಸಂಗತಿಯೆಂದರೆ ದುಷ್ಕರ್ಮಿಗಳು ಕೃತ್ಯ ನಡೆಸಿದ ಬಳಿಕ ಆರಾಮವಾಗಿ ಯಾವುದೇ ಭಯವಿಲ್ಲದೇ ಕಾರು ಏರಿ ಸಾರ್ವಜನಿಕರ ಮುಂದೆಯೇ ಕಾರು ಏರಿ ಹೊರಟಿದ್ದಾರೆ. ಅವರು ತಪ್ಪಿಸಿಕೊಳ್ಳುವುದನ್ನು ಜನ ನೋಡುತ್ತಾ ನಿಂತಿದ್ದರು.

ಹಂತಕರು ನಾಲ್ಕರಿಂದ ಐದು ಮಂದಿಯಿದ್ದರು. ಆದರೆ ಅಲ್ಲಿ ಸಾರ್ವಜನಿಕರು ಸುಮಾರು 25 ಜನ ಸೇರಿದ್ದರು. ಮನಸ್ಸು ಮಾಡಿದ್ದರೆ ದುಷ್ಕರ್ಮಿಗಳನ್ನು ತಡೆಯಬಹುದಿತ್ತು. ಆದರೆ ಯಾರೂ ತಡೆಯದೇ ಇದ್ದಿದ್ದು ವಿಪರ್ಯಾಸ.


Planned murder of Suhas Shetty in bajpe Mangalore with Team and public support and supporting them to leave that places.Every single movement of the public was just to kill him. No one is trying to stop murder or no one has tried to catch the murderers @narendramodi pic.twitter.com/3SSZGr12dx

— Shabarish Shetty???? (@Imshabrishetty7) May 1, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ