ಸಿಎಂ ಗಾದಿಗೆ ಎಂಬಿಪಿ, ಡಿಕೆಶಿ ಹಾವು – ಮುಂಗುಸಿಯಂತೆ ಕಿತ್ತಾಟ?

ಬುಧವಾರ, 15 ಮೇ 2019 (15:42 IST)
ಸಿಎಂ ಆಗಲು ಎಂ.ಬಿ. ಪಾಟೀಲ ಮತ್ತು ಡಿ.ಕೆ.ಶಿವಕುಮಾರ ಹಾವು‌ ಮುಂಗುಸಿ‌ ತರಹ ಕಚ್ಚಾಡುತ್ತಿದ್ದಾರೆ. ಹೀಗಂತ ಬಿಜೆಪಿ ಶಾಸಕ ದೂರಿದ್ದಾರೆ.

ಇಬ್ಬರೂ ಸಹ ಸಿಎಂ ಆಗಲು ಕುಂದಗೋಳ, ಚಿಂಚೊಳಿ ಕ್ಷೇತ್ರದ ಮೇಲೆ ಬಂಡವಾಳ ಹೂಡಿದ್ದಾರೆ. ಒಂದೊಂದು ಜಿಪಂಗೆ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿ ಮಾಡಿದ್ದಾರೆ. ಮಂತ್ರಿ ಸ್ಥಾನ ಉಳಿಯಬೇಕಾದರೆ ಖರ್ಚು ಮಾಡಿ ಅಂತಾ ಡಿಕೆಶಿ ಅವರಿಗೆ ಸೂಚಿಸಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ‌ ಬಿಜೆಪಿ‌ ಮುಖಂಡ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ದೂರಿದ್ರು.

ಜೀವನದಲ್ಲಿ ಏನಾದರೂ ಮಾಡಿ ಸಿಎಂ ಆಗಬೇಕು ಅಂತಾ ಡಿಕೆಶಿ‌ ಜಿದ್ದಿಗೆ ಬಿದ್ದಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಡಿಕೆಶಿ ಐವತ್ತು ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು. ಡಿಕೆಶಿಗೆ ಜಲ ಸಂಪನ್ಮೂಲ‌ ಬದಲಿಗೆ ಭ್ರಷ್ಟ ಸಂಪನ್ಮೂಲ‌ ಸಚಿವ ಅಂತಾ ಹೆಸರಿಡಬೇಕು. ಮಾನ ಮರ್ಯಾದೆ ಗೌರವ ಎಲ್ಲ ಬಿಟ್ಟು ‌ನಿಂತಿದ್ದಾರೆ.

ರಾಮನಗರದಲ್ಲಿ ಓರ್ವ ಶಾಸಕನನ್ನು ಗೆಲ್ಲಿಸಲು ಆಗಿಲ್ಲ. ಇಲ್ಲಿ‌ ಬಂದು ಕುಂದಗೋಳದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಆಟ ಕುಂದಗೋಳದಲ್ಲಿ ನಡೆಯುವುದಿಲ್ಲ ಎಂದು ಟೀಕೆ ಮಾಡಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ