ಯಡಿಯೂರಪ್ಪ ಮನೆ ಮುಂದೆ ವಾಚಮನ್ ಆಗ್ತೀನಿ ಎಂದ ಜಮೀರ್

ಬುಧವಾರ, 15 ಮೇ 2019 (15:13 IST)
ಮೇ 23 ರ ಲೋಕ ಫಲಿತಾಂಶ ನಂತರ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿದರೆ ನಾನು ಯಡಿಯೂರಪ್ಪರ ಮನೆ ಮುಂದೆ ವಾಚಮನ್ ಕೆಲಸ ಮಾಡ್ತೀನಿ. ಹೀಗಂತ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಯಾವ ಬದಲಾವಣೆಗಳೂ ಆಗೋದಿಲ್ಲ. ಅವರು ಕನಸು ಕಾಣುತ್ತಿದ್ದಾರೆ ಅಂತ ಬಿಜೆಪಿಯವರಿಗೆ ವ್ಯಂಗ್ಯವಾಡಿದ್ರು.

ಇನ್ನು ಕೆ.ಎಸ್.ಈಶ್ವರಪ್ಪರ ಮಾತಿಗೆ ಬೆಲೆ ಇಲ್ಲ. ಕೊಚ್ಚೆ ಮೇಲೆ ಎಸೆದರೆ ನಮಗೆ ಸಿಡಿಯುತ್ತದೆ ಎಂದು ಲೇವಡಿ ಮಾಡಿದ್ರು. ಈಶ್ವರಪ್ಪ ಒಬ್ಬ ಮನುಷ್ಯನಾ? ಎಂದು ಸಚಿವ ಜಮೀರ್ ಟೀಕೆ ಮಾಡಿದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ