ಮಾಧ್ಯಮ ಪ್ರತಿನಿಧಿಗಳಿಗೆ ತಲೆ ಕೆಟ್ಟಿದೆಯೇ: ನಾಲಿಗೆ ಹರಿಬಿಟ್ಟ ಈಶ್ವರಪ್ಪ

ಗುರುವಾರ, 16 ನವೆಂಬರ್ 2017 (11:24 IST)
ಖಾಸಗಿ ವೈದ್ಯರ ಮುಷ್ಕರ ಕುರಿತಂತೆ ಬಿಜೆಪಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉದ್ಧಟತನದಿಂದ ವರ್ತಿಸಿದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಿಮಗೇನು ತಲೆ ಕೆಟ್ಟಿದೆಯೇ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
 
 ಈಶ್ವರಪ್ಪನವರೇ ನಿಮಗ್ಯಾಕೆ ವೈದ್ಯರ ಬಗ್ಗೆ ಅನುಕಂಪ? ಸಾಮಾನ್ಯ ಜನರ ಬಗ್ಗೆ ಅನುಕಂಪ ಯಾಕಿಲ್ಲ ಎಂದು ಪ್ರಶ್ನಿಸಿದ ಮಾಧ್ಯಮದವರ ವಿರುದ್ಧ ಕಿಡಿಕಾರಿದ ಈ ರೀತಿ ಪ್ರಶ್ನೆ ಕೇಳುತ್ತೀರಾ?  ನಿಮಗೆ ತಲೆ ಸರಿಯಿಲ್ಲವಾ ಎಂದು ಮರುಪ್ರಶ್ನೆ ಹಾಕಿದ್ದಕ್ಕೆ ಸುದ್ದಿಗಾರರು ಪ್ರಶ್ನೆ ಕೇಳುವುದು ನಮ್ಮ ಹಕ್ಕು ಎಂದು ತಿರುಗೇಟು ನೀಡಿದ್ದಾರೆ.
 
ಬಿಜೆಪಿ ಮುಖಂಡರಾದ ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾವೇರಿ ವೈದ್ಯರ ಮುಷ್ಕರ ನಡೆಯುತ್ತಿರುವುದಾಗಿ ಘೋಷಿಸಿದರು, ಸುವರ್ಣಸೌಧಧ ಎದುರಿಗೆ ಕಾಟಾಚಾರಕ್ಕಾಗಿ ಕೆಲ ಕಾಲ ಪ್ರತಿಭಟನೆ ನಡೆಸಿರುವುದು ಕಂಡು ಬಂದಿದೆ.
 
ಕಾವೇರಿದ ಖಾಸಗಿ ವೈದ್ಯರ ಮುಷ್ಕರದಿಂದ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು. ಯಾವಾಗ ಅಂತ್ಯಗೊಳ್ಳಲಿದೆಯೋ ಎನ್ನುವ ಆತಂಕ ಎಲ್ಲರನ್ನು ಕಾಡುತ್ತಿದೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ