ಸಿಎಂ ನೇತೃತ್ವದಲ್ಲಿ ರೈತ ಮುಖಂಡರ ಜೊತೆ ಸಭೆ

geetha

ಭಾನುವಾರ, 11 ಫೆಬ್ರವರಿ 2024 (14:42 IST)
ಬೆಂಗಳೂರು- ನಗರದ ವಿಧಾನಸೌದದಲ್ಲಿ  ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರೈತ ಮುಖಂಡರ ಜೊತೆ ಸಭೆ ನಡೆಸಲಾಗಿದೆ.ಸಭೆಯಲ್ಲಿ ರೈತರು ಮುಖಂಡರು ಹಾಗೂ ಸಚಿವರಾದ ವೆಂಕಟೇಶ್, ಶಿವಾನಂದ್ ಪಾಟೀಲ್ , ದರ್ಶನ್ ಪುಟ್ಟಣ್ಣಯ್ಯ ಉಪಸ್ಥಿತರಿದ್ದರು.
 
ಫೆಬ್ರವರಿ 16 ರಂದು ರಾಜ್ಯ ಬಜೆಟ್ ಹಿನ್ನೆಲೆ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ಬಳಿಕ ಇಂದು ರೈತ ಮುಖಂಡರು ಮತ್ತು ಸಂಘ ಸಂಸ್ಥೆಗಳ ಜೊತೆ ಸಿಎಂ‌ ಸಭೆ ನಡೆಸಿದ್ದು,ಬಜೆಟ್ ನಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.ಮಾಧ್ಯಹ್ನ ವಾಣಿಜ್ಯ,ಸಾರಿಗೆ,ಅಬಕಾರಿ ಮತ್ತು ಭೂಮಾರುಕಟ್ಟೆ, ದಲಿತ ಸಂಘಟನೆ ಹಾಗೂ ಕಾರ್ಮಿಕ ಸಂಘ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ