ಸಾಲದಿಂದ ರೈತರು ಸಾಯೋದಿಲ್ಲ ಎಂದ ಸಚಿವ!

ಸೋಮವಾರ, 13 ಆಗಸ್ಟ್ 2018 (18:48 IST)
ಬಹುತೇಕರು ಕೌಟುಂಬಿಕ ಕಲಹಗಳಿಂದ ಇಲ್ಲವೇ ಮತ್ತಿತರ ಕಾರಣಗಳಿಂದ ಸಾವನ್ನಪ್ಪುತ್ತಾರೆ. ಆದರೆ ಸಾಲಬಾಧೆಯಿಂದ ಎಲ್ಲಾ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಕೃಷಿ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅನ್ನದಾತರು ಸಾಲಬಾಧೆಯಿಂದ ಸಾಯೋದಿಲ್ಲ. ಸತ್ತವರೆಲ್ಲ ರೈತರಲ್ಲ ಎಂದೂ ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಾಧ್ಯಮಗಳು ಸುದ್ದಿಗಳನ್ನು ವೈಭವೀಕರಿಸುತ್ತಿವೆ ಎಂದೂ ಕೃಷಿ ಸಚಿವರು ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ