ಪರಿವರ್ತನಾ ಯಾತ್ರೆಗೆ ಗೈರಾದ ಶಾಸಕ ಆನಂದ ಸಿಂಗ್‌

ಶನಿವಾರ, 6 ಜನವರಿ 2018 (19:30 IST)
ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕ ಆನಂದ ಸಿಂಗ್ ಅವರು ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೆ ಗೈರು ಹಾಜರಿಯಾಗಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯಲ್ಲಿ ಸಂಸದ ಬಿ.ಶ್ರೀರಾಮುಲು ಸೇರಿದಂತೆ ಇತರೆ ನಾಯಕರು ಕೂಡ ಪಾಲ್ಗೊಂಡಿದ್ದಾರೆ.
 
ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಯಾಗಿರುವ ಗಣಿ ಉದ್ಯಮಿ ಕಿಶೊರ ಪತ್ತಿಕೊಂಡ ಅವರನ್ನು ಪಕ್ಷದ ನಾಯಕರು ಬೆಳೆಸಲು ಮುಂದಾಗಿದ್ದಾರೆ ಎಂದು ಅಸಮಾಧಾನಗೊಂಡಿರುವ ಆನಂದ ಸಿಂಗ್  ಅವರುನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ, ಸಮಾಧಾನಗೊಳ್ಳದ ಆನಂದ ಸಿಂಗ್ ಅವರು ಯಾತ್ರೆಯಿಂದ ಕೊನೆಗೂ ದೂರ ಉಳಿದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ