ಅನಂತಕುಮಾರ ಹೆಗಡೆ ಹುಚ್ಚನಾಯಿ ಎಂದ ಶಾಸಕ ಪುಟ್ಟಣ್ಣಯ್ಯ

ಮಂಗಳವಾರ, 23 ಜನವರಿ 2018 (20:04 IST)
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಹುಚ್ಚನಾಯಿ ಎಂದು ರೈತ ನಾಯಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಚಳವಳಿಗಾರರನ್ನು ನಾಯಿಗಳು ಎನ್ನುವುದಾದರೆ, ಹೀಗೆ ಹೇಳುವವರು ಹುಚ್ಚ ನಾಯಿ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಚಳವಳಿಗಾರರನ್ನು ಗೌರವಿಸುವ ಜ್ಞಾನವಿಲ್ಲದೇ ಸಚಿವರು ನಾಯಿ ಎಂದು ಹೇಳಿದ್ದಾರೆ. ಆದರೆ, ಹೋರಾಟ ಮಾಡುವ ನಾವೆಲ್ಲ ನಿಯತ್ತಿನ ನಾಯಿಗಳು, ಸಂವಿಧಾನ ಬದಲಾವಣೆ ಮಾಡಬೇಕು ಎನ್ನುವ ಇವರು ಮೊದಲು ಬದಲಾಗಬೇಕು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ