‘ಏ.29ರಿಂದ ಮೋದಿ ರಾಜ್ಯ ಪ್ರವಾಸ ಆರಂಭ

ಶುಕ್ರವಾರ, 28 ಏಪ್ರಿಲ್ 2023 (18:25 IST)
ಪ್ರಧಾನಿ ಜಾರಿಗೆ ತಂದ ಯೋಜನೆಗೆ ಬೇರೆ ಹೆಸರಿಟ್ಟು ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರಸ್​​ ವಿರುದ್ದ ಕಿಡಿಕಾರಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯಾವ ಗ್ಯಾರಂಟಿ ಕಾರ್ಡನ್ನ ಹಂಚುತ್ತಿದ್ದಾರೆ, ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲ ಅಂತಾಗಿದೆ.. ಹಾಗಾಗಿ ಪಕ್ಷವೇ ವ್ಯಾಲಿಡಿಟಿ ಕಳೆದುಕೊಂಡಿದೆ ಹಾಗಿದ್ದ ಮೇಲೆ ಯಾವ ಗ್ಯಾರಂಟಿ ಕಾರ್ಡ್​​ ಕೊಡ್ತಾರೆ ಎಂದು ಶೋಭಾ ಕರಂದ್ಲಾಜೆ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಏಪ್ರಿಲ್​ 29ರಿಂದ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಆರಂಭವಾಗಲಿದೆ. 29ರಂದು ಹುಮ್ನಾಬಾದ್​​ನಿಂದ ಮೊದಲ ಕಾರ್ಯಕ್ರಮ ಆರಂಭವಾಗಲಿದ್ದು. 9 ವಿಧಾನಸಭಾ ಕ್ಷೇತ್ರದ ಜೋಡಣೆಯಾಗಲಿದೆ. ಮೊದಲು ವಿಜಯಪುರ, ಕುಡಚಿಗೆ ಮೋದಿಯವರು ಹೋಗಲಿದ್ದಾರೆ. ಬಳಿಕ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ