ಮೊಳಕಾಲ್ಮೂರಿನಲ್ಲಿ 2 ಕೋಟಿಗೂ ಅಧಿಕ ಹಣ ಜಪ್ತಿ

ಶುಕ್ರವಾರ, 11 ಮೇ 2018 (10:06 IST)
ಚಿತ್ರದುರ್ಗ: ನಾಳೆ ಚುನಾವಣೆ ನಡೆಯಲಿರುವ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಭಾರೀ ಮೊತ್ತದ ಹಣ ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಪ್ರವಾಸಿ ಮಂದಿರ ಬಳಿ ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ, 17 ಲಕ್ಷ, 36 ಸಾವಿರ ರೂ.ಗಳಷ್ಟು ನಗದು ಪತ್ತೆಯಾಗಿದೆ. ಐಟಿ ಮತ್ತು ಚುನಾವಣಾ ಆಯೋಗ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಪ್ರವಾಸಿ ಬಂಗಲೆಯಲ್ಲೇ ಹಣ ಎಣಿಕೆ ಮಾಡಲಾಗಿದೆ.

ಆಂಧ್ರದ ರಾಯರೆಡ್ಡಿ ಕಡೆಯಿಂದ ಈ ಕಾರು ಬರುತ್ತಿತ್ತು ಎನ್ನಲಾಗಿದೆ. KA 34 N9617 ಸಂಖ್ಯೆಯ ಸ್ಕಾರ್ಪಿಯೋ ವಾಹನ ಇದಾಗಿದ್ದು, ಅಧಿಕಾರಿಗಳು ಕಾರಿನ ಚಾಲಕನನ್ನು ತೀವ್ರ ವಿಚಾರಣೆಗೊಳಪಡಿಸತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ