ಕೊರೋನಾದಿಂದ ಅನಾಥಳಾದ ಬಾಲಕಿಗೆ ಆಸರೆಯಾದ ಶಾಸಕ ರೇಣುಕಾಚಾರ್ಯ
ಬಾಲಕಿಯನ್ನು ಸಾಂತ್ವನಿಸಿದ ಶಾಸಕರು, ಆಕೆಗೆ ಆರ್ಥಿಕ ಸಹಾಯ ಮಾಡಿದ್ದಲ್ಲದೆ, ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಕೊವಿಡ್ ಕೇಂದ್ರಗಳಲ್ಲಿ ಆಹಾರ ತಯಾರಿಸಿಕೊಟ್ಟು, ಅವರ ಜೊತೆ ಯೋಗ ಮಾಡಿ, ಭರವಸೆ ತುಂಬಿದ್ದಲ್ಲದೆ, ಇದೀಗ ಇಂತಹದ್ದೊಂದು ಕೆಲಸಕ್ಕೆ ಮುಂದಾಗಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.