ನಾಮಪತ್ರ ಸಲ್ಲಿಸಿ ಸಂಸದರಿಗೆ ಟಾಂಗ್ ನೀಡಿದ ಎಂಟಿಬಿ

ಗುರುವಾರ, 14 ನವೆಂಬರ್ 2019 (15:14 IST)
ಉಪ ಚುನಾವಣೆ ಅಖಾಡ ರಂಗೇರುತ್ತಿದ್ದು, ಎಂಟಿಬಿ ನಾಗರಾಜ್ ಹೊಸಕೋಟೆಯಿಂದ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಅಧಿಕೃತವಾಗಿ ಸೋಮವಾರ ನಾಮಪತ್ರ ಸಲ್ಲಿಸುವೆ ಎಂದಿರೋ ಎಂಟಿಬಿ ನಾಗರಾಜ್, ಬಿಜೆಪಿ ಮುಖಂಡರು ಹಾಗೂ ಸಂಸದ ಬಿ.ಎನ್.ಬಚ್ಚೇಗೌಡರು ನನಗೆ ಸಪೋರ್ಟ್ ಮಾಡೋಕೆ ನಾಮಪತ್ರ ಸಲ್ಲಿಕೆ ದಿನ ಬರಲಿದ್ದಾರೆ ಅಂತ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಶರತ್ ಇದೇ ಕ್ಷೇತ್ರದಲ್ಲಿ ಪಕ್ಷೇತರವಾಗಿ ಕಣಕ್ಕೆ ಇಳಿಯೋದು ಪಕ್ಕಾ ಆಗಿರೋದ್ರಿಂದ ಕಣ ಕುತೂಹಲ ಮೂಡಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ