ಮುತ್ತಪ್ಪ ರೈ ಪುತ್ರನಿಂದ ಮತ್ತೆ ಪುಂಡಾಟ

ಶನಿವಾರ, 27 ಮೇ 2023 (15:50 IST)
ಹೊಟೇಲ್ ನಲ್ಲಿ ತಮ್ಮ ಮೇಲೆ‌ ದೂರು ನೀಡಿದ್ದ ಶ್ರೀನಿವಾಸ್ ನಾಯ್ಡು ಮೇಲೆ ಮುತ್ತಪ್ಪ ರೈ ಮಗನ್ನ ಬೆಂಬಲಿಗರು ಮತ್ತೆ ಹಲ್ಲೆ ಮಾಡಿದ್ದಾರೆ.ರಿಕ್ಕಿ ರೈ ಮತ್ತು ಬೆಂಬಲಿಗರಿಂದ ಶ್ರೀನಿವಾಸ್ ನಾಯ್ಡು ಮೇಲೆ ಹಿಗ್ಗಾ ಮುಗ್ಗ ಥಳಿಸಲಾಗಿದೆ.ರಿಚ್ಮಂಡ್ ಸರ್ಕಲ್  ಕಾಝೇ ಹೊಟೇಲ್ ನಲ್ಲಿ ತಡರಾತ್ರಿ ಘಟನೆ ನಡೆದಿದೆ.ಉದ್ಯಮಿ ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಪ್ರಕರಣದಲ್ಲಿ ರಿಕ್ಕಿ ರೈ ಆರೋಪಿಯಾಗಿದ್ದು,ಸದಾಶಿವನಗರ ಪೊಲೀಸ್ರು ಈ ಕೇಸ್ ನಲ್ಲಿ ಕೋರ್ಟ್ ಗೆ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದಾರೆ.ಇದೇ ಜಿದ್ದಿನಲ್ಲಿ ಹೊಟೇಲ್ ನಲ್ಲಿ ಸಿಕ್ಕ ಶ್ರೀನಿವಾ ನಾಯ್ಡು ಮೇಲೆ ರಿಕ್ಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರೋ ಆರೋಪ ಕೇಳಿಬಂದಿದೆ.ಪೊಲೀಸ್ರ ಮುಂದೇಯೆ ಶ್ರೀನಿವಾಸ್ ನಾಯ್ಡು ಕಾರು ಅಡ್ಡಗಟ್ಟಿ ಹಲ್ಲೆ ಗೆ ಯತ್ನಿಸಲಾಗಿದೆ.ಕಬ್ಬನ್ ಪಾರ್ಕ್ ಠಾಣೆಯಲ್ಲಿ  ಉದ್ಯಮಿ ಶ್ರೀನಿವಾಸ್ ನಾಯ್ಡು ದೂರು ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ