ಎನ್.ಮಹೇಶ್ ರಾಜೀನಾಮೆ: ಉಪಸಭಾಪತಿ ಹೇಳಿದ್ದೇನು ಗೊತ್ತಾ?

ಶುಕ್ರವಾರ, 12 ಅಕ್ಟೋಬರ್ 2018 (18:39 IST)
ಶಾಸಕ  ಎನ್. ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಉಪಸಭಾಪತಿ ಪ್ರತಿಕ್ರಿಯೆ ನೀಡಿದ್ದಾರೆ.

ಉಪಸಭಾಪತಿ  ಎಂ. ಕೃಷ್ಣಾರೆಡ್ಡಿ ಹೇಳಿಕೆ  ನೀಡಿದ್ದು, ಕಾಂಗ್ರೆಸ್ ಪಕ್ಷದ ಜೊತೆ ಮಾಯಾವತಿಯ ಪಕ್ಷದ ಕೊಂಡಿ ಕಳಚಿರುವುದರಿಂದ ಎನ್. ಮಹೇಶ್ ರಾಜೀನಾಮೆ ನೀಡಿದ್ದಾರೆ. 

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಸಿಎಂ  ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ನಿಕಟ ಸಂಬಂಧವನ್ನು ಮಹೇಶ್ ಅವರು ಹೊಂದಿದ್ದಾರೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಆಗಲ್ಲ ಹಾಗೂ ಆಡಳಿತದಲ್ಲಿ ಯಾವುದೇ ರೀತಿಯ  ಗೊಂದಲಗಳಿಲ್ಲ ಎಂದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ