ನಮ್ಮ ಕ್ಯಾಂಟೀನ್`ಗೆ `ಇಂದಿರಾ ಕ್ಯಾಟೀನ್’ ಎಂದು ನಾಮಕರಣ: ಟ್ವಿಟ್ಟರ್`ನಲ್ಲಿ ಸಿಎಂ ಘೋಷಣೆ
ತಮಿಳುನಾಡಿನ ಅಮ್ಮ ಕ್ಯಾಂಟೀನ್ ರೀತಿ ಬೆಂಗಳೂರು ನಗರಕ್ಕೆ ನಮ್ಮ ಕ್ಯಾಂಟೀನ್ ಯೋಜನೆಯನ್ನ ಸಿಎಂ ಸಿದ್ದರಾಮಯ್ಯ ಬಜೆಟ್`ನಲ್ಲಿ ಘೋಷಿಸಿದ್ದರು. ಇದೀಗ, ನಮ್ಮ ಕ್ಯಾಂಟೀನ್ ಹೆಸರನ್ನ ಬದಲಾಯಿಸಲಾಗಿದ್ದು, ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಟ್ವಿಟ್ಟರ್`ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ನಮ್ಮ ಕ್ಯಾಂಟೀನ್ ಹೆಸರನ್ನ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡುವಂತೆ ಕಾಂಗ್ರೆಸ್ ಶಾಸಕರು ಸಿಎಂ ಮೇಲೆ ಒತ್ತಡ ಹಾಕಿದ್ದರು. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು.