2 ದಿನ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ!

ಬುಧವಾರ, 11 ಆಗಸ್ಟ್ 2021 (16:10 IST)
ನಮ್ಮ ಮೆಟ್ರೋ ಕೆಂಗೇರಿ ಮಾರ್ಗ ಪೂರ್ಣಗೊಂಡಿದ್ದು, ಇಂದು ಮತ್ತು ನಾಳೆ ಅಂತಿಮ ಸುರಕ್ಷತಾ ಪರೀಕ್ಷೆ ಪರೀಕ್ಷೆ. ಬಳಸಲುವೇ ಸುರಕ್ಷತಾ ಆಯುಕ್ತರಿಂದ ಪರೀಕ್ಷಾ ಸಂಚಾರ ನಡೆಯಲಿ, ನೇರಳೆ ಮಾರ್ಗದ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವಿಜಯನಗರದಿಂದ ನಾಯಂಡನಹಳ್ಳಿ ಮಾರ್ಗದಲ್ಲಿ ಎರಡು ದಿನ ಸಂಚಾರ ಸ್ಥಗಿತಗೊಳ್ಳುವುದು, ವಿಜಯನಗರ ಟು ಬಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಆಗಸ್ಟ್ 13 ರ ಮುಂಜಾನೆಯಿಂದ ಎಂದಿನಂತೆ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೆಟ್ರೋ ಮಾರ್ಗ ಸಂಚಾರ ಸುರಕ್ಷಿತ ಎಂದು ಪ್ರಮಾಣಪತ್ರವನ್ನು ವಾಣಿಜ್ಯ ಸಂಚಾರಕ್ಕೆ ಆಯುಕ್ತರು ಒಪ್ಪಿಗೆ ನೀಡುತ್ತಾರೆ.
ಒಟ್ಟು 7.53 ಕಿ ಉದ್ದ ಉದ್ದವಿರೋ ವಿಸ್ತರಣಾ ಮಾರ್ಗ ಇದಾಗಿದೆ, 1,560 ಕೋಟಿ ವೆಚ್ಚದಲ್ಲಿ ಈ ಮಾರ್ಗವನ್ನು ನಿರ್ಮಿಸಲಾಗಿದೆ. ನಾಯಂಡನಹಳ್ಳಿ ಯಿಂದ ಕೆಂಗೇರಿ ನಂತರ ಒಟ್ಟು 6 ಎತ್ತರಿಸಿದ ನಿಲ್ದಾಣ ಸಿದ್ಧವಾಗಿದೆ. ಸುರಕ್ಷತಾ ಪ್ರಮಾಣಪತ್ರವನ್ನು ಪಡೆದರೆ ಆಗಸ್ಟ್ 20 ರೊಳಗೆ ವಾಣಿಜ್ಯ ಸಂಚಾರ ಆರಂಭದ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ