Kamal Hassan: ಕಮಲ್ ಹಾಸನ್ ಸಿನಿಮಾ ರಿಲೀಸ್ ಮಾಡಿದ್ರೆ ಥಿಯೇಟರ್ ಗೆ ಬೆಂಕಿ ಬೀಳುತ್ತೆ: ನಾರಾಯಗೌಡ ಎಚ್ಚರಿಕೆ

Krishnaveni K

ಶನಿವಾರ, 31 ಮೇ 2025 (10:52 IST)
ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಮಲ್ ಹಾಸನ್ ಸಿನಿಮಾ ಥಗ್ಸ್ ಆಫ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆಯಾದರೆ ಥಿಯೇಟರ್ ಗೆ ಬೆಂಕಿ ಬೀಳುತ್ತದೆ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.

ಥಗ್ಸ್ ಆಫ್ ಲೈಫ್ ಮೂವಿ ಸಿನಿಮಾ ಈವೆಂಟ್ ನಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಶಿವಣ್ಣನ ಎದುರೇ ಹೇಳಿದ್ದ ಕಮಲ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಮೇಲಿನಿಂದ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಸಮರ್ಥಿಸುತ್ತಾ ಬಂದಿದ್ದಾರೆ.

ಹೊರಗಿನಿಂದ ಬಂದವರು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಮಾತನಾಡುವುದು ಹೆಚ್ಚಾಗಿದೆ.  ನಟನ ಬಗ್ಗೆ ಅಭಿಮಾನ ಇತ್ತು. ಆದರೆ ಮೊನ್ನೆ ಆಡಿದ ಮಾತು ಕನ್ನಡಿಗರನ್ನು ಕೆರಳಿಸಿತ್ತು. ಏಕಾಏಕಿ ತಮಿಳರನ್ನು ಓಲೈಸುವ ಹೇಳಿಕೆ ನೀಡಿದ್ದಾರೆ. ಶಿವರಾಜ್ ಕುಮಾರ್ ಕೂಡಾ ಅಲ್ಲಿಯೇ ಇದ್ದರು. ಅವರು ಒಂದು ಮಾತು ಹೇಳಬಹುದಿತ್ತು.

ಹೀಗಾಗಿ ಕಮಲ್ ಹಾಸನ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ದುಸ್ಸಾಹಸ ಮಾಡಬೇಡಿ. ಮಾಡಿದರೆ ಥಿಯೇಟರ್ ಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ