Coastal karnataka Rain:ಸುರಿದ ಭಾರೀ ಮಳೆಗೆ ಪ್ರಾಣಿ ಪ್ರಿಯೆ ರಜನಿ ಅವರು ಸಾಕಿದ್ದ ಪ್ರಾಣಿಗಳ ಅವಸ್ಥೆ ನೋಡಕ್ಕೆ ಆಗ್ತಿಲ್ಲ

Sampriya

ಶುಕ್ರವಾರ, 30 ಮೇ 2025 (18:17 IST)
Photo Credit X
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

ಹಲವೆಡೆ ಮನೆಗೆ ನೀರು ನುಗ್ಗಿ ಜನರು ಹೊರ ಹೋಗಲು, ಮನೆಯಲ್ಲಿ ಇರಲು ಪರದಾಡುತ್ತಿರುವ ಘಟನೆಗಳು ಅನೇಕ ಕಡೆ ವರದಿಯಾಗಿದೆ.

ಪ್ರಾಣಿ ಪ್ರೀತಿ ಹಾಗೂ ಪ್ರಾಣಿಗಳ ಆರೈಕೆಯಿಂದಲೇ ಗುರುತಿಸಿಕೊಂಡಿರುವ ರಜನಿ ಅವರ ಮನೆಗೂ ನೀರು ನುಗ್ಗಿದೆ. ಬೀದಿಯಲ್ಲಿ ಅನಾಥವಾಗಿ, ಆಹಾರವಿಲ್ಲದೆ, ರೋಗದಿಂದ ಬಳಲುತ್ತಿರುವ ನೂರಾರು ನಾಯಿಗಳನ್ನು ರಜನಿ ಅವರು ಆರೈಕೆ ಮಾಡುತ್ತಿದ್ದಾರೆ. ಪ್ರಾಣಿಗಳ ಆರೈಕೆಯಿಂದಲೇ ಇವರು ಗುರುತಿಸಿಕೊಂಡಿದ್ದಾರೆ.

ಇದೀಗ ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ರಜನಿ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಮನೆಗೆ ನೀರು ನುಗ್ಗಿದ್ದರಿಂದ ಸಾಕಿಕೊಂಡಿದ್ದ ಪ್ರಾಣಿಗಳು  ತೊಂದರೆಗೆ ಒಳಗಾಗಿದೆ. ಅದಲ್ಲದೆ ಪ್ರಾಣಿಗಳಾಗಿ ತಂದಿಟ್ಟಿದ್ದ ಅಕ್ಕಿ, ಬಟ್ಟೆ,  ಫ್ರಿಡ್ಜ್‌ ನೀರಿನಲ್ಲಿ ಮುಳುಗಿದೆ.

ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 
 
 
 
View this post on Instagram
 
 
 
 
 
 
 
 
 
 
 

A post shared by Rajani damodhar shetty (@rajani_shetty11official)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ