ರಾಯಚೂರು ಜಿ.ಪಂ ಸಿಇಓ ಕೂರ್ಮರಾವ್ ಹೊತ್ತೊಯ್ದ ಪ್ರಕರಣಕ್ಕೆ ಟ್ವಿಸ್ಟ್

ಶನಿವಾರ, 25 ಮಾರ್ಚ್ 2017 (08:24 IST)
ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ಕೂರ್ಮರಾವ್ ಅವರನ್ನ ಹೊತ್ತೊಯ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸಿಇಓ ಅವರನ್ನ ನಾವೇ ಸ್ವಯಂಪ್ರೇರಿತವಾಗಿ ಹೊತ್ತೊಯ್ದಿದ್ದಾಗಿ ಗ್ರಾಮಸ್ಥರಾದ ದೇವಪ್ಪ, ನರಸಿಂಹಲು ಖಾಸಗಿ ಚಾನಲ್`ಗೆ ಹೇಳಿಕೆ ನೀಡಿದ್ದಾರೆ.
 

ಸಿಇಓ ಕೂರ್ಮರಾವ್ ಒಳ್ಳೆಯ ಅಧಿಕಾರಿಯಾಗಿದ್ದಾರೆ. ಅವರು ಬೇಡ ಬೇಡ ಎಂದರೂ ಕೊಳಚೆ ಇದ್ದುದ್ದರಿಂದ ಜಾರಿ ಬೀಳಬಹುದೆಂದು ನಾವೇ ಹೊತ್ತೊಯ್ದೆವು, ಈ ವಿಷಯದಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಲಿಖಿತ ಉತ್ತರ ನೀಡಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ನಿನ್ನೆ ರಾಯಚೂರು ತಾಲೂಕಿನ ಅತ್ಕೂರು ಗ್ರಾಮಕ್ಕೆ ಬಂದಿದ್ದ ಸಿಇಓ ಕೂರ್ಮಾರಾವ್ ಅವರನ್ನ ಗ್ರಾಮಸ್ಥರೇ ಹೊತ್ತು ಕೊಳಚೆ ದಾಟಿಸಿದ್ದರು. ಈ ದೃಶ್ಯ ಎಲ್ಲೆಡೆ ಹರದಾಡಿ ಭಾರೀ ವಿವಾದ ಸೃಷ್ಟಿಯಾಗಿತ್ತು.

ವಿಧಾನಸಭೆಯಲ್ಲೂ ವಿಷಯ ಪ್ರಸ್ತಾಪವಾಗಿ ಸಿಎಂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

 

ವೆಬ್ದುನಿಯಾವನ್ನು ಓದಿ