ಗಳ ಗಳ ಅತ್ತು ಕಣ್ಣೀರು ಸುರಿಸಿದ ನಿಖಿಲ್ ಕುಮಾರಸ್ವಾಮಿ

ಮಂಗಳವಾರ, 10 ಡಿಸೆಂಬರ್ 2019 (14:00 IST)

ರಾಜ್ಯದ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಖುಷಿ ತಂದಿದ್ದರೆ, ಜೆಡಿಎಸ್ ಗೆ ಆಘಾತವಾಗಿದ್ದು ತೆನೆಹೊತ್ತ ಪಕ್ಷದ ಮುಖಂಡರು ಕಣ್ಣೀರು ಸುರಿಸುತ್ತಿದ್ದಾರೆ.
 

ರೈತ ಪರ ಕೆಲಸ ಮಾಡಿದ್ದರೂ ಕುಮಾರಣ್ಣನ ಕೈ ಹಿಡಿಯಲಿಲ್ಲ. ನಮ್ಮ ತಂದೆ ಮಾಡಿರೋ ಅನ್ಯಾಯವಾದರೂ ಏನು ಅಂತ ನಿಖಿಲ್ ಪ್ರಶ್ನೆ ಮಾಡಿದ್ದಾರೆ.ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದರು.

ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದರು. ಆದರೂ ಕೆಆರ್ ಪೇಟೆಯಲ್ಲಿ ಜೆಡಿಎಸ್ ಸೋತದ್ದು ಏಕೆ? ಮತದಾರರು ಏಕೆ ಕೈ ಹಿಡಿದಿಲ್ಲ ಅಂತೆಲ್ಲ ಗಳ ಗಳ ಕಣ್ಣೀರು ಸುರಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ