ವಿನಯ್ ಗೂ ನನಗೂ ಯಾವುದೇ ಸಂಬಂಧವಿಲ್ಲ: ಈಶ್ವರಪ್ಪ

ಶನಿವಾರ, 23 ಸೆಪ್ಟಂಬರ್ 2017 (21:36 IST)
ಬೆಂಗಳೂರು: ಮಾಜಿ ಡಿಸಿಎಂ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲದೆ ಈ ಬಗ್ಗೆ ತನಿಖೆಯೂ ಚುರುಕು ಪಡೆದಿದೆ.

ಆದರೆ ವಿಷಯ ಇದಲ್ಲ. ವಿನಯ್ ಗೂ ತನಗೂ ಸಂಬಂಧವಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇಷ್ಟು ದಿನ ಈಶ್ವರಪ್ಪನವರು ವಿನಯ್ ತಮ್ಮ ಆತ್ಮೀಯ ಎನ್ನುತ್ತಿದ್ದರು. ಆದರೆ ಇಂದು ದಿಢೀರನೆ ವಿನಯ್ ಗೂ ನನಗೂ ಸಂಬಂಧವೇ ಇಲ್ಲ ಎಂದು ತಮ್ಮ ಪರ ವಕೀಲರಿಂದ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. 

ಈಶ್ವರಪ್ಪ ನ್ಯಾಯಾಲಯದಲ್ಲಿ ಈ ಕುರಿತು ದಾವೆ ಹೂಡಿದ್ದು, ತಡೆ ಆಜ್ಞೆ ಸಹ ತಂದಿದ್ದಾರೆ. ಸಿವಿಲ್ ನ್ಯಾಯಾಲಯ ಕಿಡ್ನಾಪ್ ಯತ್ನ ವಿಚಾರವಾಗಿ ವಿನಯ್ ತಮ್ಮ ಆಪ್ತ ಎಂದು ಸುದ್ದಿ ಬಿತ್ತರಿಸದಂತೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶದ ಬಗ್ಗೆ ಈಶ್ವರಪ್ಪ ಪರ ವಕೀಲ ಬಿ.ಎಸ್.ರಾಜಶೇಖರ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ