ಗ್ಯಾನವ್ಯಾಪಿ ಮಸೀದಿ ಕುರಿತು ಆಕ್ಷೇಪಾರ್ಹ ಪೋಸ್ಟ್‌

geetha

ಮಂಗಳವಾರ, 13 ಫೆಬ್ರವರಿ 2024 (20:42 IST)
ರಾಮನಗರ : ಉತ್ತರ ಪ್ರದೇಶದ ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ಕೋರ್ಟ್‌ ಆದೇಶದ ಬಗ್ಗೆ ಚಾಂದ್‌ ಪಾಶಾ ಆಕ್ಷೇಪಾರ್ಹ ಪೋಸ್ಟ್‌ ಹಂಚಿಕೊಂಡಿದ್ದರು. ಈ ಬಗ್ಗೆ ಬಿಜೆಪಿ ಮುಖಂಡ ಪಿ. ಶಿವಾನಂದ ಫೆ. 3 ರಂದು ದೂರು ದಾಖಲಿಸಿದ್ದರು. ಗ್ಯಾನವ್ಯಾಪಿ ಮಸೀದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಂಚಿಕೊಂಡ ಆರೋಪದ ಮೇಲೆ ವಕೀಲರೊಬ್ಬರನ್ನು ಬಂಧಿಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಎಸ್‌ಡಿಪಿಐ ಮುಖಂಡ ಮತ್ತು ವಕೀಲ ಚಾಂದ್‌ ಪಾಶಾ ಬಂಧಿತ ಆರೋಪಿ .ಚಾಂದ್‌ ಪಾಶಾ ಅವರ ವಿರುದ್ದ ಐಪಿಸಿ 504, 505(3) ಸೆಕ್ಷನ್‌ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ